Select Your Language

Notifications

webdunia
webdunia
webdunia
webdunia

ವಾಟ್ಸಪ್ ಸ್ಟೇಟಸ್; ನಿಖಿಲ್ ಕುಮಾರಸ್ವಾಮಿ ಅಭಿಮಾನಿಗೆ ಬೆದರಿಕೆ

ವಾಟ್ಸಪ್ ಸ್ಟೇಟಸ್; ನಿಖಿಲ್ ಕುಮಾರಸ್ವಾಮಿ ಅಭಿಮಾನಿಗೆ ಬೆದರಿಕೆ
ಮಂಡ್ಯ , ಶನಿವಾರ, 25 ಮೇ 2019 (17:52 IST)
ವಾಟ್ಸಪ್‌ ಸ್ಟೇಟಸ್‌ನಲ್ಲಿ ನಿಖಿಲ್ ಪರ ಬರೆದುಕೊಂಡಿದ್ದಕ್ಕೆ ಯುವಕನಿಗೆ ಜೀವ ಬೆದರಿಕೆ ಹಾಕಲಾಗಿದೆ.

ಹೀಗಾಗಿ ರಕ್ಷಣೆ ನೀಡುವಂತೆ ಪೊಲೀಸರಿಗೆ ಯುವಕ ಮೊರೆ ಹೋಗಿದ್ದಾನೆ. ವಾಟ್ಸಪ್ ಸ್ಟೇಟಸ್‌ಗೆ ನಿಖಿಲ್ ಫೋಟೋ ಹಾಕಿ ನಿಮ್ಮ‌ ಜೊತೆ ನಾವು ಎಂದು  ಚೇತನ್ ಎಂಬ ಯುವಕ ಬರೆದುಕೊಂಡಿದ್ದ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನವನಾದ ಚೇತನ್, ಶಾಸಕ ಸುರೇಶ್‌ಗೌಡ ಪರ ಗುರುತಿಸಿಕೊಂಡಿದ್ದ.

ಚೇತನ್, ನಿಖಿಲ್ ಪರ ಹಾಕಿಕೊಂಡಿದ್ದ ಸ್ಟೇಟಸ್ ನೋಡಿ ಚೇತನ್ ವಾಟ್ಸಪ್‌ಗೆ 13 ವಾಯ್ಸ್ ರೆಕಾರ್ಡ್ ಮೆಸೇಜ್ ನ್ನು ಮೂವರು ಯುವಕರು ಕಳುಹಿಸಿದ್ದರು. ಮಾಜಿ ಶಾಸಕ ಚೆಲುವರಾಯಸ್ವಾಮಿ ಪರ ಮಾತನಾಡುತ್ತ ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಸಕ ಸುರೇಶ್‌ಗೌಡ, ನಿಖಿಲ್ ವಿರುದ್ಧ ಅವಾಚ್ಯ ಶಬ್ದ ಬಳಸಿ ವಾಯ್ಸ್ ರೆಕಾರ್ಡ್ ಮೆಸೇಜ್ ಮಾಡಿದ್ದಾರೆ.

ನಾಗಮಂಗಲ ತಾಲ್ಲೂಕಿನವರೇ ಆದ ಚಂದನ್, ಮಾರುತಿ, ಪವನ್ ಎಂಬುವವರು ನಿಖಿಲ್ ಅಭಿಮಾನಿ ಚೇತನ್‌ಗೆ ಪ್ರಾಣ ಬೆದರಿಕೆ ಒಡ್ಡಿ ವಾಯ್ಸ್ ರೆಕಾರ್ಡ್ ಕಳುಹಿಸಿದ್ದಾರೆ. ಮೂವರು ಕಿಡಿಗೇಡಿಗಳಿಗೆ ಬೆದರಿ ಯುವಕ ಚೇತನ್ ಪೊಲೀಸರ ಮೊರೆ ಹೋಗಿದ್ದಾನೆ. ಪೊಲೀಸರಿಂದ ಮೂವರು ಯುವಕರಲ್ಲಿ ಓರ್ವನ ಬಂಧನವಾಗಿದ್ದು, ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಜತೆ ಕೈಪಡೆ ಮುಖಂಡರ ಭಾವಚಿತ್ರ; ಹೆಚ್ಚಿದ ಕುತೂಹಲ