Publish Date: Fri, 26 Apr 2019 (14:47 IST)
Updated Date: Fri, 26 Apr 2019 (14:48 IST)
ಕಳ್ಳರು ತಮ್ಮ ಕೈಚಳಕ ತೋರಿ ವ್ಯಾಪಾರಿಯೊಬ್ಬರಿಗೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟುಮಾಡಿದ್ದಾರೆ.
ಅಂಗಡಿಯೊಂದರ ಶೆಲ್ಟರ್ ಮುರಿದು ಕಳ್ಳರ ಕೈಚಳಕ ತೋರಿದ್ದಾರೆ.
ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ವೆಂಕಟೇಶ್ವರ ಟಾಕೀಸ್ ಬಳಿ ಘಟನೆ ನಡೆದಿದೆ.
ಸಿಮೆಂಟ್ ಗೋಡನ್ ಶೆಲ್ಟರ್ ಮುರಿದು ಕಳ್ಳತನ ಮಾಡಿರೋ ಕಳ್ಳರು 1 ಲಕ್ಷ ನಗದು, 100 ಕೆಜಿ ಬೈಂಡಿಂಗ್ ತಂತಿ ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.