Webdunia - Bharat's app for daily news and videos

Install App

ತೋಟದ ಮನೆಯಲ್ಲಿ ಡಬಲ್ ಮರ್ಡರ್ ಕಾರಣ ಏನು?

Webdunia
ಬುಧವಾರ, 15 ಮೇ 2019 (11:36 IST)
ತಡರಾತ್ರಿ ತೋಟದ ಮನೆಯೊಂದರಲ್ಲಿ ವಯೋವೃದ್ಧ ದಂಪತಿ ಬರ್ಬರ ಹತ್ಯೆ ನಡೆದಿದೆ. ಇದರಿಂದ ಇಡೀ ಊರಿನ ಜನರು ಬೆಚ್ಚಿ ಬಿದ್ದಿದ್ದಾರೆ.

ಮೈಸೂರಿನಲ್ಲಿ ವಯೋವೃದ್ಧರ  ಮರ್ಡರ್ ಆಗಿದೆ. ಮೈಸೂರು ತಾಲೂಕಿನ ನಾಗವಾಲದ ತೋಟದ ಮನೆಯಲ್ಲಿ ಘಟನೆ ನಡೆದಿದೆ. ವಯೋವೃದ್ಧರ ತಲೆಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಮೈಸೂರು ಹುಣಸೂರು ಮುಖ್ಯ ರಸ್ತೆ ಸಮೀಪ ಇರೋ ತೋಟದ ಮನೆಯಲ್ಲಿ ಘಟನೆ ನಡೆದಿದೆ. ನಾಗವಾಲ ಈರತ್ತಣ್ಣ (80), ಪತ್ನಿ ಶಿವಮ್ಮ (75) ಬರ್ಬರ ಹತ್ಯೆಗೊಳಗಾದವರು.

ತೋಟದಲ್ಲಿದ್ದ ಸೆಂಟ್ರಿಂಗ್ ಸಾಮಾನು ನೋಡಿಕೊಂಡು ಅಲ್ಲೇ ಉಳಿದ್ದಿದ್ದರು ವೃದ್ಧ ದಂಪತಿ. 4 ಹೆಣ್ಣು ಮಕ್ಕಳು ಓರ್ವ ಗಂಡು ಮಗನನ್ನು ಹೊಂದಿರೋ ದಂಪತಿ ಕೊಲೆಯಾಗಿದ್ದಾರೆ.

ದಂಪತಿ ಕೊಲೆ ಯಾಕೆ ನಡೆದಿದೆ ಅನ್ನೋ ಬಗ್ಗೆ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ಇಲವಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಮೈಸೂರು ದಕ್ಷಿಣ ವಿಭಾಗದ ಡಿವೈಎಸ್ಪಿ ಕ್ಷಮಾ ಮಿಶ್ರ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಶ್ವಾನದಳ, ಬೆರಳಚ್ಚು ದಳದಿಂದ ಪರಿಶೀಲನೆ ನಡೆದಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments