Select Your Language

Notifications

webdunia
webdunia
webdunia
webdunia

ಮಗನೇ ಲಾರಿ ಹತ್ತಿಸಿ ತಾಯಿಯ ಕೊಲೆಮಾಡಲು ಕಾರಣವೇನು?

ಮಗನೇ ಲಾರಿ ಹತ್ತಿಸಿ ತಾಯಿಯ ಕೊಲೆಮಾಡಲು ಕಾರಣವೇನು?
ದೇವನಹಳ್ಳಿ , ಮಂಗಳವಾರ, 19 ಡಿಸೆಂಬರ್ 2017 (09:31 IST)
ಹೆತ್ತ ತಾಯಿಯ ಮೇಲೆ ಮಗ ಲಾರಿ ಹತ್ತಿಸಿ ಕೊಲೆ ಮಾಡಿರುವ ಭೀಕರ ಘಟನೆ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕೆಂಪತಿಮ್ಮನಹಳ್ಳಿಯಲ್ಲಿ ಜರುಗಿದೆ.

ಯಲಹಂಕದ ಜಯಶ್ರೀ ಕೊಲೆಯಾದ ಮಹಿಳೆಯಾಗಿದ್ದು, ಇವರ ಕಿರಿಯ ಮಗ ಅರುಣ್ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಜಯಶ್ರಿ ತಮ್ಮ ಆಸ್ತಿಯ ಜಾಗದಲ್ಲಿ ದೇವಸ್ಥಾನ ನಿರ್ಮಾಣ ಮಾಡಬೇಕೆಂದು ಸ್ನೇಹಿತೆಯೊಂದಿಗೆ ಕೆಂಪತಿಮ್ಮನಹಳ್ಳಿ ಗ್ರಾಮಕ್ಕೆ ಹೋಗಿ ದೇವಸ್ಥಾನಕ್ಕೆ ಜಮೀನಿಲ್ಲಿ ಭೂಮಿ ಪೂಜೆ ನಡೆಸುತ್ತಿದ್ದಾಗ ಲಾರಿ ಹತ್ತಿಸಿ ಕೊಲೆ ಮಾಡಲಾಗಿದೆ.

ಪೂಜೆ ಮಾಡಲು ಅಡ್ಡಿಪಡಿಸಿದರೂ ತಾಯಿ ಪೂಜೆ ಮುಂದಾಗಿದ್ದರಿಂದ ಕುಪಿತನಾದ ಮಗ ಈ ಕೃತ್ಯ ಎಸಗಿದ್ದಾನೆ. ಜಯಶ್ರೀಗೆ ಮೈಯಲ್ಲಿ ದೇವರು ಬರುತ್ತಿತ್ತು. ಆದ್ದರಿಂದ ಗ್ರಾಮದಲ್ಲಿ ದೇವಸ್ಥಾನ ಕಟ್ಟಲು ಮುಂದಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಗೆಲ್ಲಲು ಮೋದಿ-ಶಾ ಬಿಗ್ ಪ್ಲ್ಯಾನ್!