Select Your Language

Notifications

webdunia
webdunia
webdunia
webdunia

ಕರ್ನಾಟಕ ಗೆಲ್ಲಲು ಮೋದಿ-ಶಾ ಬಿಗ್ ಪ್ಲ್ಯಾನ್!

ಕರ್ನಾಟಕ ಗೆಲ್ಲಲು ಮೋದಿ-ಶಾ ಬಿಗ್ ಪ್ಲ್ಯಾನ್!
ಬೆಂಗಳೂರು , ಮಂಗಳವಾರ, 19 ಡಿಸೆಂಬರ್ 2017 (09:25 IST)
ಬೆಂಗಳೂರು: ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ನಂತರ ಇದೀಗ ಬಿಜೆಪಿ ಕಣ್ಣು ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯತ್ತ ಹೊರಳಿದೆ.
 

ಇದಕ್ಕಾಗಿ ಕರ್ನಾಟಕದ ಜನರನ್ನು ಸೆಳೆಯಲು ಮೋದಿ-ಶಾ ಜೋಡಿ ಭರ್ಜರಿ ಯೋಜನೆ ರೂಪಿಸಿದ್ದಾರೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬಿಜೆಪಿ ಹಾದಿ ಸುಗಮವಾಗಿಲ್ಲ. ಇಲ್ಲಿ ನಾಯಕರ ಮುಖ ನೋಡಿ ಓಟು ಹಾಕಲ್ಲ ಎಂದು ತಿಳಿದಿರುವ ಮೋದಿ-ಶಾ ಜೋಡಿ ನೀರಿನ ಸಮಸ್ಯೆಯ ಪರಿಹಾರಕ್ಕೇ ಕೈ ಹಾಕಿದೆ.

ಇಷ್ಟು ದಿನ ಮಹದಾಯಿ ನೀರಿನ ಸಮಸ್ಯೆ ಬಗ್ಗೆ ಮೌನವಾಗಿದ್ದ ಪ್ರಧಾನಿ ಮೋದಿ ಇದೀಗ ಚುನಾವಣೆಯ ಹೊಸ್ತಿಲಲ್ಲಿ ಈ ಸಮಸ್ಯೆಗೆ ಪರಿಹಾರ ನೀಡುವ ಮೂಲಕ ಉತ್ತರ ಕರ್ನಾಟಕದ ಜನರ ಸೆಳೆಯಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.

ಹೇಗದರೂ ಸರಿಯೇ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಬಿಜೆಪಿ ನಾಯಕರು ಕರ್ನಾಟಕ ಜನರ ಬಹುಮುಖ್ಯ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿ ಆ ಮೂಲಕ ಜನರಿಗೆ ಹತ್ತಿರವಾಗಲು ಯತ್ನ ನಡೆಸಿದ್ದಾರೆ. ರಾಜ್ಯ ನಾಯಕರನ್ನೇ ನೆಚ್ಚಿ ಕೂರದೇ ರಾಷ್ಟ್ರ ನಾಯಕರೇ ಕರ್ನಾಟಕವನ್ನು ತೆಕ್ಕೆಗೆ ಸೆಳೆಯಲು ರಣತಂತ್ರ ರೂಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಶಸ್ಸು ಕಂಡ ರಾಹುಲ್ ಗಾಂಧಿ ಧಾರ್ಮಿಕ ಪ್ರಯೋಗ