Select Your Language

Notifications

webdunia
webdunia
webdunia
webdunia

ಶೋಕಿ ಜೀವನಕ್ಕಾಗಿ ಬೈಕ್ ಕದಿಯುತ್ತಿದ್ದವರ ಕಥೆ ಏನಾಯ್ತು ಗೊತ್ತಾ?

ಶೋಕಿ ಜೀವನಕ್ಕಾಗಿ ಬೈಕ್ ಕದಿಯುತ್ತಿದ್ದವರ ಕಥೆ ಏನಾಯ್ತು ಗೊತ್ತಾ?
ಬೆಂಗಳೂರು , ಬುಧವಾರ, 28 ನವೆಂಬರ್ 2018 (18:10 IST)
ಆ ಖದೀಮರಿಗೆ ಶೋಕಿ  ಮಾಡುವ ಖಯಾಲಿ ಇತ್ತು. ಶೋಕಿಗೆ ದುಡ್ಡು ಹೊಂದಿಸಿಕೊಳ್ಳಲು ಬೈಕ್ ಗಳನ್ನು ಕದಿಯುತ್ತಿದ್ದರು. ಕೊನೆಗೆ ಆಗಬಾರದ್ದು ಆಗಿದೆ.

ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಪೋಲಿಸರು ಯಶಸ್ವಿ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಮಾರಿ(22) ಹಾಗು ಶಿವಕುಮಾರ್(20) ಸಿಕ್ಕಿ ಬಿದ್ದ ಖದೀಮರಾಗಿದ್ದಾರೆ.

ಇವರು ಬನ್ನೇರುಘಟ್ಟ, ಹುಳಿಮಾವು, ಬಿಟಿಎಂ ಲೇಔಟ್ ಸುತ್ತಮುತ್ತಲಿನ ಕಡೆ ಬೈಕ್ ಕಳ್ಳತನ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಬನ್ನೇರುಘಟ್ಟ ಎಸ್.ಐ ನವೀನ್ ನೇತೃತ್ವದ ತಂಡ ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬಂಧಿತ ಆರೋಪಿಗಳಿಂದ ನಾಲ್ಕು ಡಿಯೋ ಬೈಕ್ ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೋಲಾರ ಡಿಸಿಸಿಗೆ ಅಧ್ಯಕ್ಷರಾಗಿ ಗೋವಿಂದಗೌಡ ಅವಿರೋಧ ಆಯ್ಕೆ