Select Your Language

Notifications

webdunia
webdunia
webdunia
webdunia

ಸಂಬಳ ಕೇಳಿದ್ದಕ್ಕೆ ಮಂಚಕ್ಕೆ ಕರೆದ ತಹಶೀಲ್ದಾರ

ಶಿವಮೊಗ್ಗ
ಶಿವಮೊಗ್ಗ , ಮಂಗಳವಾರ, 15 ಸೆಪ್ಟಂಬರ್ 2020 (12:45 IST)
ಶಿವಮೊಗ್ಗ : ಸಂಬಳ ಕೇಳಿದ ಗ್ರಾಮ ಸಹಾಯಕಿಯನ್ನು ತಹಶೀಲ್ದಾರ ಮಂಚಕ್ಕೆ ಕರೆದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.

ಭದ್ರಾವತಿಯ ಸಿದ್ದಾಪುರ ಗ್ರಾಮ ಸಹಾಯಕಿಯಾಗಿ ಕೆಲಸ ಮಾಉತ್ತಿದ್ದ ಮಹಿಳೆ ಸಂಬಳ ನೀಡುವಂತೆ ತಹಶೀಲ್ದಾರರ ಬಳಿ ಮನವಿ ಮಾಡಿಕೊಂಡಿದ್ದಾಳೆ. ಆದರೆ ತಹಶೀಲ್ದಾರ ತನ್ನೊಂದಿಗೆ ಸಹಕರಿಸಿದರೆ ಮಾತ್ರ ಸಂಬಳ ಕೊಡುವುದಾಗಿ ಹೇಳಿದ್ದಾರೆ ಎಂದು ಮಹಿಳೆ ತಹಶೀಲ್ದಾರರ ವಿರುದ್ಧ ಆರೋಪ ಮಾಡಿದ್ದಾಳೆ.

ಈ ಬಗ್ಗೆ ಮಹಿಳೆ  ತಹಶೀಲ್ದಾರರ ವಿರುದ್ಧ ಹಳೆನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ದೂರು ದಾಖಲಾಗುತ್ತಿದ್ದಂತೆ ಜಿಲ್ಲಾಧಿಕಾರಿ  ತಹಶೀಲ್ದಾರನನ್ನು ಕೆಲಸದಿಂದ ವಜಾಗೊಳಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಜೀವಕ್ಕೆ ಕುತ್ತು ತರುತ್ತಾರೆಂಬ ಅನುಮಾನದಲ್ಲಿ ಪತ್ನಿ-ಅತ್ತೆಯ ಕತೆ ಮುಗಿಸಿದ!