Webdunia - Bharat's app for daily news and videos

Install App

ಮಹಿಳಾ ಪೇದೆ ಜೊತೆ ಶಾಸಕರ ಬೆಂಬಲಿಗರು ಮಾಡಿದ್ದೇನು?

Webdunia
ಬುಧವಾರ, 18 ಜುಲೈ 2018 (17:43 IST)
ಅವರು ಮಹಿಳಾ ಪೇದೆ, ಮತ್ತೊಂದಿಷ್ಟು ಜನರು ಜೆಡಿಎಸ್ ಶಾಸಕರ ಬೆಂಬಲಿಗರು. ಮಹಿಳಾ ಪೇದೆ ಜತೆ ಕೆ.ಆರ್. ಎಸ್ ಬೃಂದಾವನ ಬಳಿ ಶಾಸಕರ ಬೆಂಬಲಿಗರು ಮಾತಿನ ಚಕಮಕಿ ನಡೆಸಿದ್ದಾರೆ.

ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಹಾಗೂ ಮಹಿಳಾ ಪೇದೆ ನಡುವೆ ಮಾತಿನ ಚಕಮಕಿ ನಡೆದಿದೆ. ಮಹಿಳಾ ಪೇದೆ ಜತೆ ವಾಗ್ವಾದಕ್ಕಿಳಿದ ಶಾಸಕರ ಬೆಂಬಲಿಗರು. ಕೆ ಆರ್ ಎಸ್ ಬೃಂದಾವನ ಪ್ರವೇಶಿಸಲು ಮಹಿಳಾ ಪೇದೆ ಜೊತೆ ವಾಗ್ವಾದ ನಡೆಸಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ ಆರ್ ಎಸ್ ಬಳಿ ಘಟನೆ ನಡೆದಿದೆ. ಬೃಂದಾವನ ಪ್ರವೇಶಿಸಲು ಬ್ಯಾರಿಕೆಡ್ ಹಾಕಿ ಒಳ ಹೋಗದಂತೆ ತಡೆದ ಮಹಿಳಾ ಪೊಲೀಸ್ ಪೇದೆಯ ಜತೆ ವಾಗ್ವಾದ ನಡೆಸಲಾಗಿದೆ. ಬ್ಯಾರಿಕೆಡ್ ಸೈಡಿಗೆ ತಳ್ಳಿ ಹಾಕಿದ ಶಾಸಕ ರವೀಂದ್ರ ಬೆಂಬಲಿಗರು ಗುಂಡಾವರ್ತನೆ ತೋರಿದ್ದಾರೆ ಎಂದು ಜನರು ದೂರಿದ್ದಾರೆ.

ಏನಮ್ಮ ರೌಡಿ ಆಡಿದಂಗೆ ಆಡ್ತಿಯಾ? ಇದು ಯಾರ ತಾತನು ಕಟ್ಟಿದ್ದಲ್ಲ. ನಿನಗೆ ಒಳ ಹೋಗಬೇಡಿ ಅನ್ನೊ ಹಕ್ಕಿಲ್ಲ. ಅದ್ಯಾರನ್ನ ಕರೆಸ್ತಿಯೊ ಕರೆಸಮ್ಮ ಎಂದು ಏರು ದನಿಯಲ್ಲಿ ಮಾತಿನ ಚಕಮಕಿ ನಡೆಸಿದ ರವೀಂದ್ರ ಬೆಂಬಲಿಗರು, ಮಹಿಳಾ ಪೇದೆ ಜತೆ ಮಾತಿನ ಚಕಮಕಿ ನಡೆಸಿದ್ದಾರೆ. ಮಹಿಳಾ ಪೊಲೀಸ್ ಪೇದೆ ಹಾಗೂ ಶಾಸಕರ ಬೆಂಬಲಿಗರ ನಡುವಿನ ವಾಗ್ವಾದ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments