Publish Date: Sat, 30 Jun 2018 (11:20 IST)
Updated Date: Sat, 30 Jun 2018 (11:21 IST)
ಬೆಂಗಳೂರು: ಕುರುಬ ಸಮುದಾಯದವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿರುವ ಕಾಗಿನೆಲೆ ಶ್ರೀಗಳು ಹಿಂದೆ ಸಿದ್ದರಾಮಯ್ಯ ಅನ್ಯಾಯ ಮಾಡಿದಾಗ ಎಲ್ಲಿದ್ರು ಎಂದು ಜೆಡಿಎಸ್ ಶಾಸಕ, ಎಚ್ ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಕಾಗಿನೆಲೆ ಶ್ರೀಗಳಿಗೆ ಟಾಂಗ್ ಕೊಟ್ಟ ವಿಶ್ವನಾಥ್ ‘ಕೆಲವು ಮಠಾಧೀಶರು ಅಧಿಕಾರವಿದ್ದ ಕಡೆ ವಾಲುತ್ತಾರೆ. ಸನ್ಯಾಸಿಗಳು ರಾಜಕಾರಣದಲ್ಲಿ ಮೂಗು ತೂರಿಸಬಾರದು. ಆದರೆ ಕೆಲವರು ತಮ್ಮ ಜೋಳಿಗೆ ತುಂಬಿಸಲು ರಾಜಕಾರಣ ಮಾಡುತ್ತಾರೆ’ ಎಂದು ಟಾಂಗ್ ಕೊಟ್ಟಿದ್ದಾರೆ.
ಸ್ವಾಮೀಜಿಗಳು ರಾಜಕಾರಣಿಗಳು, ಅಧಿಕಾರಿಗಳ ಪರ ವಕಾಲತ್ತು ವಹಿಸುವುದು ನಿಲ್ಲಿಸಬೇಕು. ಕುರುಬ ಸಮುದಾಯದವರಿಗಾಗಿ ನಿಜವಾಗಿ ಹೋರಾಟ ಮಾಡಿದವನು ನಾನು ಎಂದು ವಿಶ್ವನಾಥ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.