Select Your Language

Notifications

webdunia
webdunia
webdunia
webdunia

ಹೆಚ್‍ಡಿಕೆ ನೂತನ ಬಜೆಟ್‍ಗೆ ಸಿದ್ದರಾಮಯ್ಯನವರ ತಕರಾರಿಲ್ಲ: ಜಿಟಿಡಿ

ಹೆಚ್‍ಡಿಕೆ ನೂತನ ಬಜೆಟ್‍ಗೆ ಸಿದ್ದರಾಮಯ್ಯನವರ ತಕರಾರಿಲ್ಲ: ಜಿಟಿಡಿ
ಬೆಳಗಾವಿ , ಶುಕ್ರವಾರ, 29 ಜೂನ್ 2018 (15:57 IST)
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೂತನ ಬಜೆಟ್ ಮಂಡನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಕರಾರು ತೆಗೆದಿಲ್ಲ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ರೈತರ ಸಂಪೂರ್ಣ ಸಾಲ ಮನ್ನಾಗೆ ಸಿದ್ದರಾಮಯ್ಯ ಒಪ್ಪಿದ್ದಾರೆ. ದೇವೇಗೌಡರು ಹಾಗೂ ಸಿದ್ದರಾಮಯ್ಯ ನಡುವೆ ಯಾವುದೇ ರೀತಿಯ ದ್ವೇಷ ಇಲ್ಲ. ಇವರಿಬ್ಬರ ನಡುವೆ ದ್ವೇಷ ಇದ್ದಿದ್ದರೆ ಸಮ್ಮಿಶ್ರ ಸರಕಾರ ರಚನೆ ಆಗುತ್ತಿರಲಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅಸಮಧಾನ ಹೋಗಲಾಡಿಸಲು ಆರು ಸಚಿವಸ್ಥಾನಗಳನ್ನು ಭರ್ತಿ ಮಾಡದೇ ಉಳಿಸಿಕೊಳ್ಳಲಾಗಿದೆ. ನಾನು ಸಿದ್ದರಾಮಯ್ಯನವರನ್ನು ಖಂಡಿತವಾಗಿ ಸೋಲಿಸಿಲ್ಲ ಎಂದರು. ರಾಜ್ಯ ಕಾಂಗ್ರೆಸ್ ನ ಬೆಳವಣಿಗೆಗಳನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ಅನಿವಾರ್ಯ ಸ್ಥಿತಿಯಲ್ಲಿ ಸಮ್ಮಿಶ್ರ ಸರಕಾರ ರಚನೆ ಆಗಿದೆ ಎಂದೂ ಜಿ.ಟಿ.ದೇವೇಗೌಡ ಹೇಳಿದ್ದಾರೆ. 
 
 

Share this Story:

Follow Webdunia kannada

ಮುಂದಿನ ಸುದ್ದಿ

ಹುಲಿಯನ್ನು ಎದುರಿಸಲು ಕಾಗೆ, ಮಂಗ, ನರಿಗಳು ಒಂದಾಗುತ್ತಿವೆ: ಅನಂತಕುಮಾರ್ ಹೆಗ್ಡೆ