ಮಂಗಗಳ ಹಾವಳಿಗೆ ತತ್ತರಿಸಿದ್ದ ಜನರೀಗ ಖುಷ್

Webdunia
ಬುಧವಾರ, 18 ಜುಲೈ 2018 (17:30 IST)
ಓಡಾಡಲು ಸಾಧ್ಯವಿಲ್ಲದಂತೆ ಮೈ ಮೇಲೆ ಎರಗುತ್ತಿದ್ದ ಕೋತಿಗಳ ಹಾವಳಿಯಿಂದ ಆ ಊರಿನ ಜನರು ಕೆಲ ದಿನಗಳಿಂದ ನೆಮ್ಮದಿಯನ್ನೇ ಕಳೆದುಕೊಂಡಿದ್ದರು. ಕೊನೆಗೂ ಕೋತಿಗಳ ಹಾವಳಿಗೆ ಬ್ರೇಕ್ ಬಿದ್ದಿದೆ. ಈಗ ಜನರು ಖುಷ್ ಆಗಿದ್ದಾರೆ. 

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಮಂಗಗಳ ಹಾವಳಿಯಿಂದ ತತ್ತರಿಸಿದ್ದ ಜನತೆ ಈಗ ಖುಷ್ ಆಗಿದ್ದಾರೆ. ಕಳೆದ ಒಂದು ವಾರದ ಹಿಂದೆ ಬಾಲಕನೊಬ್ಬನನ್ನು ಕಚ್ಚಿ ಗಾಯಗೊಳಿಸಿದ್ದ ಮಂಗ, ಓಡಾಡಲು ಸಾಧ್ಯವಿಲ್ಲದಂತೆ ಜನರನ್ನು ಹೈರಾಣಾಗಿಸಿದ್ದವು. ಕೋತಿಗಳ ಉಪಟಳ ತಾಳಲಾರದೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

ಸಾರ್ವಜನಿಕರಿಂದ ಬಂದ ದೂರಿಗೆ ಸ್ಪಂದಿಸಿದ  ಪುರಸಭೆ ಅಧಿಕಾರಿಗಳು, ಬೋನಿಟ್ಟು ಸುಮಾರು 90 ಮಂಗಗಳನ್ನು ಹಿಡಿದರು.  ಮಂಗಗಳನ್ನು ಹಿಡಿಯಲು ಪಕ್ಕದ ರಾಜ್ಯದಿಂದ ಸಂಬಂಧಿಸಿದವರನ್ನು ಕರೆಸಿದ ಅಧಿಕಾರಿಗಳು ಕೋತಿಗಳನ್ನು ಹಿಡಿದರು. ಹಿಡಿದಿರುವ ಮಂಗಗಳನ್ನು ದೂರದ ಕಾಡಿಗೆ ಬಿಟ್ಟು ಬರುವ ತೀರ್ಮಾನವನ್ನು ಪುರಸಭೆ ಅಧಿಕಾರಿಗಳು ಕೈಗೊಂಡಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನ, ಬೆಳ್ಳಿಗೆ ಇಂದು ಹಿಂದೆಂದೂ ಕಾಣದ ಬೆಲೆ ಏರಿಕೆ

ಅಜಿತ್ ಪವಾರ್ ಕೊನೆಯ ಕ್ಷಣ ಎನ್ನಲಾದ ವಿಡಿಯೋ ಈಗ ವೈರಲ್

ನಡು ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದ ಮುಸ್ಲಿಂ ಮಹಿಳೆ: ಪೊಲೀಸರು ಮಾಡಿದ್ದೇನು video

ಅಜಿತ್ ಪವಾರ್ ಇದ್ದ ವಿಮಾನ ಪತನಕ್ಕೆ ಮುನ್ನ ಕಾಕ್ ಪೀಟ್ ನಲ್ಲಿ ಕೊನೆಯದಾಗಿ ಹೇಳಿದ್ದೇನು

ಮುಂದಿನ ಸುದ್ದಿ
Show comments