Select Your Language

Notifications

webdunia
webdunia
webdunia
webdunia

ಮೋದಿ ರೋಡ್ ಶೋಗೆ ಒಂಬತ್ತು ಕ್ಷೇತ್ರದಿಂದ ಎರಡೂವರೆ ಲಕ್ಷ ಜನರನ್ನು ಸೇರಿಸುತ್ತೇವೆ

ಮೋದಿ ರೋಡ್ ಶೋಗೆ ಒಂಬತ್ತು ಕ್ಷೇತ್ರದಿಂದ ಎರಡೂವರೆ ಲಕ್ಷ ಜನರನ್ನು ಸೇರಿಸುತ್ತೇವೆ
bangalore , ಶನಿವಾರ, 29 ಏಪ್ರಿಲ್ 2023 (15:40 IST)
ಬೆಂಗಳೂರಲ್ಲಿ ಮೋದಿ ರೋಡ್ ಶೋ ಗೂ ಮುನ್ನ ಸಚಿವರಿಂದ ಜಂಟಿ ಸುದ್ದಿಗೋಷ್ಠಿ ನಡೆಸಲಾಗಿದೆ.ಸಚಿವ ಮುನಿರತ್ನ , ಎಸ್.ಟಿ ಸೋಮಶೇಖರ್ ಹಾಗೂ ಗೋಪಾಲಯ್ಯ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ
 
ಇನ್ನೂ ಈ ವೇಳೆ ಮಾತನಾಡಿದ ಎಸ್.ಟಿ ಸೋಮಶೇಖರ್ ಮೋದಿ ಬರುವುದಕ್ಕೆ ಸ್ವಾಗತಿಸುತ್ತೇವೆ.ಸುಮಾರು 9 ವಿಧಾನಸಭೆ ಕ್ಷೇತ್ರದ ಜನರು ಭಾಗಿಯಾಗಲಿದ್ದಾರೆ.ಸುಮಾರು 5.5 ಕೀ ಲೋ ಮೀಟರ್ ರ್ಯಾಲಿ ನಡೆಯುತ್ತದೆ.ನಾಲ್ಕು ವಿಧಾನಸಭೆ ಕ್ಷೇತ್ರ ಕವರ್ ಆಗುತ್ತದೆ.ಎಲ್ಲಾ ಕಾರ್ಯಕರ್ತರಿಗೆ ಹಾಗೂ ನಾಗರಿಕರಿಗೆ ಮಾರ್ಗದರ್ಶನ ನೀಡಿದ್ದೇವೆ.ನೈಸ್ ರಸ್ತೆಯಿಂದ ಸುಂಕದ ಮಟ್ಟದವರೆಗೂ ಸಿದ್ದತೆ ಮಾಡಿಕೊಳ್ಳಲಾಗಿದೆ.ಆಯಾ ಸೆಕ್ಟರ್ ನಲ್ಲಿ ಅಭ್ಯರ್ಥಿಗಳು ನಿಲ್ಲುತ್ತೇವೆ.ಒಂಬತ್ತು ಕ್ಷೇತ್ರದಿಂದ ಎರಡೂವರೆ ಲಕ್ಷ ಜನರನ್ನು ಸೇರಿಸುತ್ತೇವೆ.ಮೋದಿಯವರನ್ನು ಹತ್ತಿರದಿಂದ ನೋಡಲು ಜನರು ಕೇಳಿದ್ರು.ಹೀಗಾಗಿ ಅವರಿಗಾಗಿ ಮೋದಿ ಅವರ ಮೇಲೆ ಹೂವು ಹಾಕಲು ಬೆಂಗಳೂರಿನ ನಾಗರಿಕರಿಗೆ ಅವಕಾಶ  ಮಾಡಿಕೊಡಲಾಗಿದೆ.ಈ ನಾಲ್ಕು ಕ್ಷೇತ್ರಕ್ಕೆ ಆನೆ ಬಲ ಬಂದಂತಾಗಿದೆ ಎಂದು ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಜಾಥ ಕಾರ್ಯಕ್ರಮ