Select Your Language

Notifications

webdunia
webdunia
webdunia
webdunia

ಸೋಲುವ ಭೀತಿಯಿಂದ ವರುಣಾದಲ್ಲಿ ಕಾಂಗ್ರೆಸ್​ನಿಂದ ಕಲ್ಲು ತೂರಾಟ : ಅಶ್ವಥ್ ನಾರಾಯಣ

ಸೋಲುವ ಭೀತಿಯಿಂದ ವರುಣಾದಲ್ಲಿ ಕಾಂಗ್ರೆಸ್​ನಿಂದ ಕಲ್ಲು ತೂರಾಟ : ಅಶ್ವಥ್ ನಾರಾಯಣ
bangalore , ಶನಿವಾರ, 29 ಏಪ್ರಿಲ್ 2023 (15:10 IST)
ವರುಣಾ ಕ್ಷೇತ್ರದಲ್ಲಿ ಸೋಲುವ ಭೀತಿಗೆ ಸಿಲುಕಿರುವ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಅಶ್ವಥ್ ನಾರಾಯಣ ಕಿಡಿ ಕಾರಿದ್ದಾರೆ..ನಮ್ಮ ಅಭ್ಯರ್ಥಿ ಸೋಮಣ್ಣ ಪ್ರಚಾರದ ವೇಳೆ ಕಲ್ಲು ತೂರಾಟ ನಡೆಸಿ ತೋಳ್ಬಲ ಪ್ರದರ್ಶನ ನಡೆಸಿದೆ. ಇದಕ್ಕೆಲ್ಲಾ ನಾವು ಹೆದರಲ್ಲ. ಅಲ್ಲಿ ನಮ್ಮ ಗೆಲುವು ಖಚಿತ, ಸೋಮಣ್ಣ ಗೆಲ್ಲಲಿದ್ದಾರೆ. ಬಿಜೆಪಿ ಸರ್ಕಾರವೇ ಮತ್ತೆ ರಚನೆಯಾಗಲಿದೆ....ನಮ್ಮ ಕಾರ್ಯಕರ್ತರ ಮೇಲೆ ವರುಣಾದಲ್ಲಿ ಆದ ಹಲ್ಲೆಯನ್ನು ಖಂಡಿಸುತ್ತೇನೆ. ಕಾಂಗ್ರೆಸ್ ನಾಯಕರು ವ್ಯವಸ್ಥಿತವಾಗಿ ಹಲ್ಲೆ ನಡೆಸಿ ನಮ್ಮ ಕಾರ್ಯಕರ್ತರನ್ನು ಹೆದರಿಸುವ ಪ್ರಯತ್ನ ಮಾಡಿದ್ದಾರೆ. ವರುಣಾ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದಲ್ಲಿ ಮತದ ಮೂಲಕ ತಮ್ಮ ಶಕ್ತಿ, ನಂಬಿಕೆ, ವಿಶ್ವಾಸ ವ್ಯಕ್ತಪಡಿಸುವ ಬದಲು ತೋಳ್ಳಲದ ಶಕ್ತಿ ಪ್ರದರ್ಶನವನ್ನು ಕಾಂಗ್ರೆಸ್ ಮಾಡಿದೆ. ಭಯ ಭೀತಿಯಿಂದ ಅವರು ಹೀಗೆ ಮಾಡಿದ್ದಾರೆ. ನಮ್ಮ ಕಾರ್ಯಕರ್ತರನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಕಲ್ಲು ತೂರಿಸಿದ್ದಾರೆ.ಅಭ್ಯರ್ಥಿಯಾಗಿರುವ ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ವಿರುದ್ಧ ಕಲ್ಲು ತೂರಾಟ ಮಾಡಿದ್ದಾರೆ. ಇದಕ್ಕೆಲ್ಲಾ ನಾವು ಹೆದರಲ್ಲ, ನಮ್ಮ ಕಾರ್ಯಕರ್ತರ ಜೊತೆ ನಾವಿದ್ದೇವೆ. ಅವರಿಗೆ ಧೈರ್ಯ ತುಂಬಿದ್ದೇವೆ. ಕಲ್ಲು ತೂರಿದವರ ವಿರುದ್ಧ ಕ್ರಮ ಆಗಲಿದೆ. ವರುಣಾದಲ್ಲಿ ಬಿಜೆಪಿ ಗೆಲ್ಲಲಿದೆ. ಬಿಜೆಪಿ ಸರ್ಕಾರವೇ ಮತ್ತೆ ಬರಲಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಯತ್ನಾಳ್ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ : ಅಶ್ವಥ್ ನಾರಾಯಣ