Select Your Language

Notifications

webdunia
webdunia
webdunia
webdunia

ನಮ್ಮದು ರೈತ ಪರ ಸರ್ಕಾರ, ಬಿಜೆಪಿಯವರಂತೆ ಗೋಲಿಬಾರ್ ಮಾಡಿಲ್ಲ: ಸಿಎಂ

ನಮ್ಮದು ರೈತ ಪರ ಸರ್ಕಾರ, ಬಿಜೆಪಿಯವರಂತೆ ಗೋಲಿಬಾರ್ ಮಾಡಿಲ್ಲ: ಸಿಎಂ
ಬೆಂಗಳೂರು , ಸೋಮವಾರ, 25 ಸೆಪ್ಟಂಬರ್ 2017 (14:09 IST)
ಬಿಜೆಪಿ ಸರಕಾರದ ಅವಧಿಯಲ್ಲಿ ರೈತರ ಮೇಲೆ ಗೋಲಿಬಾರ್‌ನಲ್ಲಿ ಹಲವರನ್ನು ಬಲಿ ತೆಗೆದುಕೊಂಡಿತ್ತು. ಆದರೆ ನಮ್ಮ ಸರಕಾರದ ಅವಧಿಯಲ್ಲಿ ಅಂತಹ ಯಾವುದೇ ದೌರ್ಜನ್ಯವಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 
ಬಿಜೆಪಿ ಸರಕಾರ ರೈತರ ಮೇಲೆ ಲಾಠಿಚಾರ್ಜ್ ಮಾಡಿ ದೌರ್ಜನ್ಯ ಎಸಗಿತ್ತು. ಹಲವಾರು ರೈತ ವಿರೋಧಿ ತೀರ್ಮಾನಗಳನ್ನು ತೆಗೆದುಕೊಂಡಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
 
ಕೃಷಿ ಸಚಿವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೈತರು ಬೆಳೆದ ಬೆಳೆಯನ್ನು ಸರಕಾರ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ. ಕೃಷಿಭಾಗ್ಯ, ಕೃಷಿ ಹೊಂಡ ಯೋಜನೆ ದೇಶದಲ್ಲಿಯೇ ಮೊದಲನೆಯದಾಗಿದೆ ಎಂದು ತಿಳಿಸಿದ್ದಾರೆ.
 
ನಮ್ಮ ಸರಕಾರ ರೈತರ ಪರ ಸರಕಾರವಾಗಿದೆ. ಕೆಲವರು ರೈತರಿಗೆ ಏನು ಮಾಡದಿದ್ದರೂ ತಾವೇ ಮಣ್ಣಿನ ಮಗ ಎಂದು ಹೇಳಿಕೊಳ್ಳುತ್ತಾರೆ. ನಾನು ಉಳುಮೆ ಮಾಡಿದ್ದೇನೆ, ನಾನೂ ಕೂಡಾ ರೈತರ ಮಗನೇ ಆಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ವಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿಯನ್ನ ಬಲಿ ಪಡೆದ ಸೆಲ್ಫಿ ಹುಚ್ಚು..?!