Select Your Language

Notifications

webdunia
webdunia
webdunia
webdunia

ಚಾಮುಂಡಿ ತಾಯಿಗೆ ಬೆಳ್ಳಿ ಆನೆಗಳನ್ನ ಸಮರ್ಪಿಸಿದ ಡಿ.ಕೆ. ಶಿವಕುಮಾರ್

ಚಾಮುಂಡಿ ತಾಯಿಗೆ ಬೆಳ್ಳಿ ಆನೆಗಳನ್ನ ಸಮರ್ಪಿಸಿದ ಡಿ.ಕೆ. ಶಿವಕುಮಾರ್
ಮೈಸೂರು , ಸೋಮವಾರ, 25 ಸೆಪ್ಟಂಬರ್ 2017 (12:28 IST)
ಸಚಿವ ಡಿ.ಕೆ. ಶಿವಕುಮಾರ್ ಶರನ್ನವರಾತ್ರಿ ಪ್ರಯುಕ್ತ ಕುಟುಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಡಿ.ಕೆ. ಶಿಮಕುಮಾರ್ ಚಾಮುಂಡಿ ತಾಯಿಗೆ ಎರಡು ಬೆಳ್ಳಿ ಆನೆಗಳನ್ನ ಸಮರ್ಪಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್, ಈ ಹಿಂದೆಯೂ ಹಲವು ಬಾರಿ ಚಾಮುಂಡಿ ತಾಯಿಗೆ ಸೇವೆ ಸಲ್ಲಿಸಿದ್ದೇನೆ. ಈ ಬಾರಿ ಬೆಳ್ಳಿ ಆನೆಗಳನ್ನ ಸಮರ್ಪಿಸಿದ್ದೇನೆ. ನಮ್ಮ ಕುಟುಂಬ ಮತ್ತು ರಾಜ್ಯದ ಜನತೆಗೆ ಒಳಿತಾಗಲೆಂದು ಹರಕೆ ಸಲ್ಲಿಸಿದ್ದೇನೆ. ಮನಸ್ಸಿನಲ್ಲಿ ಪ್ರಾರ್ಥಿಸಿ ದೇವಿ ಬಳಿ ಬೇಡಿಕೆಗಳನ್ನ ಇಟ್ಟಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
webdunia

ತಮ್ಮ ಮನೆ ಮೇಲಿನ ಐಟಿ ದಾಳಿ ಬಳಿಕ ಸಚಿವ ಡಿ.ಕೆ. ಶಿವಕುಮಾರ್  ದೇಗುಲಗಳ ಭೇಟಿ ಸಾಮಾನ್ಯವಾಗಿದೆ. ಐಟಿ ದಾಳಿ ಮುಗಿದ ಬಳಿಕವೇ ಅಜ್ಜಯ್ಯನನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಇತ್ತೀಚೆಗೆ ಕಬ್ಬಾಳಮ್ಮ ದೇಗುಲಕ್ಕೂ ಡಿಕೆಶಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹರಕೆ ತೀರಿಸಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಡಿಕೆಶಿ