Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಕಳ್ಳರ ಪಕ್ಷ ಎಂಬ ನನ್ನ ಹೇಳಿಕೆಗೆ ಈಗಲೂ ಬದ್ಧ: ಕೆ.ಎನ್. ರಾಜಣ್ಣ

ಕಾಂಗ್ರೆಸ್ ಕಳ್ಳರ ಪಕ್ಷ ಎಂಬ ನನ್ನ ಹೇಳಿಕೆಗೆ ಈಗಲೂ ಬದ್ಧ: ಕೆ.ಎನ್. ರಾಜಣ್ಣ
ತುಮಕೂರು , ಭಾನುವಾರ, 24 ಸೆಪ್ಟಂಬರ್ 2017 (15:12 IST)
ಕಾಂಗ್ರೆಸ್ ಕಳ್ಳರ ಪಕ್ಷ ಎಂಬ ನನ್ನ ಹೇಳಿಕೆಗೆ ಈಗಲೂ ಬದ್ಧವಾಗಿರುವುದಾಗಿ ಕಾಂಗ್ರೆಸ್ ಶಾಸಕ ಕೆ.ಎನ್, ರಾಜಣ್ಣ ಹೇಳಿದ್ದಾರೆ.

ತುಮಕೂರಿನ ರೆಡ್ಡಿ ಜನ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಣ್ಣ, ತುರ್ತು ಪರಿಸ್ಥಿತಿ ಸಂದರ್ಭದಲ್ಲೂ ನಾನು ಮತ್ತು ನಾರಾಯಣ ರೆಡ್ಡಿ ಮಾತ್ರ ಗೆದ್ದು ಬಂದಿದ್ದೆವು. 1998ರ ಕಠಿಣ ಪರಿಸ್ಥಿಯ ಚುನಾವಣೆಯಲ್ಲೂ ಗೆದ್ದು ಬಂದಿದ್ದೇನೆ. ಅಂತಹ ನನ್ನನ್ನ 2004ರಲ್ಲಿ ಚುನಾವಣೆಯಲ್ಲಿ ಹೊರಗಿಟ್ಟಿದ್ದರು. ಇಂತಹವರನ್ನ ಮತ್ತೇನನ್ನಬೇಕು. ನನ್ನನ್ನ ಹೊರಗಿಟ್ಟವರು ಈಗ ಎಲ್ಲಿಯೋ ಇದ್ದಾರೆ ಎಂದು ಹೇಳಿದ್ದಾರೆ.

ಇದೇವೇಳೆ, ಎಲ್ಲ ಪಕ್ಷಗಳಲ್ಲೂ ಕಳ್ಳರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಕಳ್ಳರ ಸಂಖ್ಯೆ ಕೊಂಚ ಕಡಿಮೆ ಎಂದು ಸಮರ್ಥನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ನನ್ನ ಹೇಳಿಕೆಗೆ ಬೆಂಬಲ ಸಿಕ್ಕಿದೆ. ಯಾರ ವಿರುದ್ಧವೂ ನಾನು ಕಾಮೆಂಟ್ ಮಾಡಿಲ್ಲ ಎಂದು ಮಧುಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಹದಾಯಿ ವಿವಾದದ ಬಗ್ಗೆ ಗೋವಾ ಸಿಎಂ ಜೊತೆ ಚರ್ಚಿಸಿದ್ದೇನೆ: ಶೆಟ್ಟರ್