Select Your Language

Notifications

webdunia
webdunia
webdunia
webdunia

ಜೆಡಿಎಸ್ ಮುಖಂಡರಿಂದ ಪಾದಯಾತ್ರೆ ಕಾರಣ ಗೊತ್ತಾ?

ಜೆಡಿಎಸ್ ಮುಖಂಡರಿಂದ ಪಾದಯಾತ್ರೆ ಕಾರಣ ಗೊತ್ತಾ?
ಯಾದಗಿರಿ , ಭಾನುವಾರ, 20 ಜನವರಿ 2019 (17:09 IST)
ಜೆಡಿಎಸ್ ಮುಖಂಡರು ಪಾದಯಾತ್ರೆ ಕೈಗೊಂಡಿದ್ದಾರೆ. 

ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿ ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮತ್ತು ನಾಗನಗೌಡ ಕಂದಕೂರ ಅವರು ಶಾಸಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಹರಕೆ ತೀರಿಸಲು ಪಾದಯಾತ್ರೆ ಕೈಗೊಳ್ಳಲಾಗಿದೆ.

ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಶರಣಗೌಡ ಕಂದಕೂರು ಯಾದಗಿರಿಯಿಂದ ಪಾದಯಾತ್ರೆ ಕೈಗೊಂಡರು.

ಕಂದಕೂರ ಗ್ರಾಮದಿಂದ ತೆಲಂಗಾಣ ರಾಜ್ಯದ ಧಾರೂರ ನ ಕ್ರೈಸ್ತ ಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಶತಾಯುಷಿ ಸಿದ್ದಗಂಗಾ ಶ್ರೀಗಳ ಜೀವಮಾನದ ಸಾಧನೆ ಎಲ್ಲಾ ಪ್ರಶಸ್ತಿ- ಪುರಸ್ಕಾರಗಳನ್ನು ಮೀರಿದ್ದಾಗಿದೆ.

ಶ್ರೀಗಳ ಭಕ್ತರ ಮನದಾಳವನ್ನು ಅರಿತು ಕೇಂದ್ರ ಸರಕಾರವು ಅವರಿಗೆ ಭಾರತ ರತ್ನ  ಪ್ರಶಸ್ತಿ ನೀಡಿ ಗೌರವಿಸಬೇಕು. ಪ್ರಶಸ್ತಿಯ ಹಿರಿಮೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ನದಿಯಲ್ಲಿ ಈಜಲು ಹೋಗಿ ಹೆಣವಾದ ಯುವಕ