Publish Date: Tue, 20 Dec 2022 (20:48 IST)
Updated Date: Tue, 20 Dec 2022 (20:50 IST)
ಬೆಂಗಳೂರಿನ ರಸ್ತೆ ಗುಂಡಿ ವಿಚಾರದಲ್ಲಿ ಕೊನೆಗೂ ಬಿಬಿಎಂಪಿ ಪಾಲಿಕೆ ಎಚ್ಚೆತ್ತುಕೊಂಡಿದೆ. ರಸ್ತೆ ಗುಂಡಿ ಮುಚ್ಚಿಲ್ಲ ಅಂದ್ರೆ ಇಂಜಿನಿಯರ್ಗಳ ವೇತನ ಕಡಿತ ಮಾಡೋದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ರಸ್ತೆ ಅಗೆತವಾದ್ರೆ ತಕ್ಷಣ ಅದನ್ನ ಮುಚ್ಚಬೇಕು. ಅದನ್ನ ಸರಿಪಡಿಸುವ ಜವಾಬ್ದಾರಿ ಸಂಬಂಧಪಟ್ಟ ಸಂಸ್ಥೆ ಹಾಗೂ ವಾಡ್೯ ಮಟ್ಟದ ಇಂಜಿನಿಯರ್ ಜವಾಬ್ದಾರಿಯಾಗಿರುತ್ತೆ. ಅಲ್ಲದೆ ರಸ್ತೆ ಅಗೆದ ಸಂಸ್ಥೆಗೂ ದಂಡ ಅದರ ಜೊತೆ ಇಂಜಿನಿಯರ್ ವೇತನ ಕೂಡ ಕಡಿತ ಮಾಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.