Publish Date: Tue, 20 Dec 2022 (20:45 IST)
Updated Date: Tue, 20 Dec 2022 (20:47 IST)
ಪಂಚಮಸಾಲಿ 2A ಮೀಸಲಾತಿ ಕುರಿತಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ನಾಲ್ಕು ಬಾರಿ ಮೀಸಲಾತಿ ಕೊಡ್ತೇವಿ ಅಂತ ಹೇಳಿ ಕೈ ಕೊಟ್ಟಿದ್ದಾರೆ. ಸಮಿತಿ ರಚನೆ ಮೀಸಲಾಗಿದೆ ವರದಿ ತರಿಸಿಕೊಳ್ಳುತ್ತಿದ್ದೇನೆ ಎನ್ನುತ್ತಿದ್ದಾರೆ, ಈ ವಿಷಯವಾಗಿ ಅವರ ಮೇಲೆ ಒತ್ತಡ ಇದೆ. ಇದೇ ತಿಂಗಳು 22ಕ್ಕೆ ನಮಗೆ ಮೀಸಲಾತಿ ಸಿಗುತ್ತೆ ಅಂತ ನಮ್ಮಗೆ ಭರವಸೆ ಇದೆ. ನಿನ್ನೆ ಕೂಡ ಬಸನಗೌಡ ಪಾಟೀಲ್ ಯತ್ನಾಳ ಸಿಎಂ ಅವರ ಜೊತೆ ಮಾತನಾಡಿದ್ದಾರಂತೆ ಅಂತಾ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.