Webdunia - Bharat's app for daily news and videos

Install App

ವಿಟ್ಲ: ಸಾರಡ್ಕ ಚೆಕ್ ಪೋಸ್ಟ್ ಬಳಿ ರಾತ್ರಿ ಸಂಚರಿಸುವಾಗ ಹುಷಾರ್: ದರೋಡೆ ಗ್ಯಾಂಗ್ ವಿಡಿಯೋ ವೈರಲ್

Krishnaveni K
ಬುಧವಾರ, 18 ಜೂನ್ 2025 (14:33 IST)
ಮಂಗಳೂರು: ಕಾಸರಗೋಡಿನಿಂದ ಪುತ್ತೂರಿಗೆ ಸಂಪರ್ಕ ಕಲ್ಪಿಸುವ ಸಾರಡ್ಕ ಚೆಕ್ ಪೋಸ್ಟ್ ಬಳಿ ರಾತ್ರಿ ವೇಳೆ ಸಂಚರಿಸುವಾಗ ವಾಹನ ಸವಾರರು ಎಚ್ಚರವಾಗಿರಬೇಕು. ಯಾಕೆಂದರೆ ಈ ರಸ್ತೆಯಲ್ಲಿ ರಾತ್ರಿ ವೇಳೆ ದರೋಡೆ ಗ್ಯಾಂಗ್ ಸಕ್ರಿಯವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತ ವಿಡಿಯೋ ಒಂದು ಈಗ ವೈರಲ್ ಆಗಿದೆ.

ಕೇರಳ-ಕರ್ನಾಟಕ ರಾಜ್ಯಗಳ ಗಡಿ ಭಾಗವಾದ ಸಾರಡ್ಕ ಗೇಟ್ ನಿಂದ ಕೆಲವೇ ಹೆಜ್ಜೆ ದೂರದಲ್ಲಿ ಗುಂಪೊಂದು ಹೆದ್ದಾರಿಯಲ್ಲಿ ಸಹಾಯ ಕೇಳುವ ನೆಪದಲ್ಲಿ ವಾಹನಗಳನ್ನು ತಡೆದು ದರೋಡೆ ಮಾಡಲೆತ್ನಿಸಿದೆ. ಪ್ರತ್ಯಕ್ಷದರ್ಶಿಯೊಬ್ಬರು ಈ ಕುರಿತು ವಿಡಿಯೋ ಸಮೇತ ಸೋಷಿಯಲ್ ಮೀಡಿಯಾದಲ್ಲಿ ಜನರಿಗೆ ಎಚ್ಚರಿಸುವ ಕೆಲಸ ಮಾಡಿದ್ದಾರೆ.

ಜೂನ್ 14 ರಂದು ತಮಗೆ ಈ ಅನುಭವ ಆಗಿದೆ ಎಂದು ಅವರು ಹಂಚಿಕೊಂಡಿದ್ದಾರೆ. ರಾತ್ರಿ ಸುಮಾರು 10 ಗಂಟೆ ವೇಳೆಗೆ ಈ ರಸ್ತೆಯಲ್ಲಿ ಕಾರ್ ಮೂಲಕ ತೆರಳುವಾಗ ಕೆಲವು ಯುವಕರ ಗುಂಪು ಇತ್ತು. ಈ ಪೈಕಿ ಒಬ್ಬಾತ ಬಿದ್ದವನಂತೆ ನಟಿಸುತ್ತಿದ್ದ. ಮತ್ತೊಬ್ಬರು ಕಾರು ನಿಲ್ಲಿಸುವಂತೆ ಸನ್ನೆ ಮಾಡುತ್ತಿದ್ದಾರೆ. ಆದರೆ ಇವರ ಬಗ್ಗೆ ಅನುಮಾನಗೊಂಡು ಆ ವ್ಯಕ್ತಿ ಕಾರು ನಿಲ್ಲಿಸದೇ ಮುಂದೆ ನಡೆದಿದ್ದಾರೆ. ಆದರೆ ಮತ್ತೆ ಕಾರ್ ನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ನೋಡಿದಾಗ ಬಿದ್ದವನಂತೆ ನಟಿಸುತ್ತಿದ್ದವನು ಎದ್ದು ನಿಂತಿದ್ದು ಇದು ದುಷ್ಕೃತ್ಯ ನಡೆಸಲೆಂದೇ ಮಾಡುತ್ತಿರುವ ಸಂಚು ಎಂದು ಮನದಟ್ಟಾಗಿದೆ.

ಇದೇ ರೀತಿ ಅನುಭವ ತಮಗೂ ಆಗಿದೆ ಎಂದು ಮತ್ತೆ ಕೆಲವರೂ ಹಂಚಿಕೊಂಡಿದ್ದಾರೆ. ಹೀಗಾಗಿ  ಈ ರಸ್ತೆಯಲ್ಲಿ ದರೋಡೆಕೋರರ ಗುಂಪು ಆಕ್ಟಿವ್ ಆಗಿದೆಯೇನೋ ಎಂಬ ಸಂಶಯ ಮೂಡಿದೆ. ಈ ಬಗ್ಗೆ ಈಗ ಪೊಲೀಸರು ಸೂಕ್ತ ತನಿಖೆ ನಡೆಸಿ ಸಾರ್ವಜನಿಕರ ಆತಂಕ ನಿವಾರಸಿಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮದ್ದೂರು ಪ್ರತಿಭಟನೆಯಲ್ಲಿ ಲಾಠಿ ಏಟು ತಿಂದು ಸುದ್ದಿಯಾಗಿದ್ದ ಮಹಿಳೆ ಮೇಲೆ ಬಿತ್ತು ಕೇಸ್, ಯಾಕೆ ಗೊತ್ತಾ

2017ರಲ್ಲಿ ಪೊಲೀಸ್ ಅಧಿಕಾರಿಯ ಕೊಲೆ ಯತ್ನ ಪ್ರಕರಣ: ಬಂಧಿತ ಆರೋಪಿ ಕೊನೆಗೂ ಅರೆಸ್ಟ್‌

ಬೆಂಗಳೂರಿನ ಶಿವಾಜಿನಗರ ಮೆಟ್ರೊ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರು: ಮುಂಬೈನಲ್ಲಿ ಗುಡುಗಿದ ಫಡಣವೀಸ್‌

ಮದ್ದೂರಿನಲ್ಲಿ ಭಾಷಣ ಮಾಡಿದ ಬಿಜೆಪಿ ನಾಯಕ ಸಿಟಿ ರವಿ ಮೇಲೆ ಬಿತ್ತು ಕೇಸ್

ವಿಪತ್ತು ಪೀಡಿತ ಪ್ರದೇಶಗಳ ಸಮೀಕ್ಷೆಗೆ ಉತ್ತರಾಖಂಡಕ್ಕೆ ಬಂದಿಳಿದ ಪ್ರಧಾನಿ

ಮುಂದಿನ ಸುದ್ದಿ
Show comments