Webdunia - Bharat's app for daily news and videos

Install App

ವಿಟ್ಲ: ಸಾರಡ್ಕ ಚೆಕ್ ಪೋಸ್ಟ್ ಬಳಿ ರಾತ್ರಿ ಸಂಚರಿಸುವಾಗ ಹುಷಾರ್: ದರೋಡೆ ಗ್ಯಾಂಗ್ ವಿಡಿಯೋ ವೈರಲ್

Krishnaveni K
ಬುಧವಾರ, 18 ಜೂನ್ 2025 (14:33 IST)
ಮಂಗಳೂರು: ಕಾಸರಗೋಡಿನಿಂದ ಪುತ್ತೂರಿಗೆ ಸಂಪರ್ಕ ಕಲ್ಪಿಸುವ ಸಾರಡ್ಕ ಚೆಕ್ ಪೋಸ್ಟ್ ಬಳಿ ರಾತ್ರಿ ವೇಳೆ ಸಂಚರಿಸುವಾಗ ವಾಹನ ಸವಾರರು ಎಚ್ಚರವಾಗಿರಬೇಕು. ಯಾಕೆಂದರೆ ಈ ರಸ್ತೆಯಲ್ಲಿ ರಾತ್ರಿ ವೇಳೆ ದರೋಡೆ ಗ್ಯಾಂಗ್ ಸಕ್ರಿಯವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತ ವಿಡಿಯೋ ಒಂದು ಈಗ ವೈರಲ್ ಆಗಿದೆ.

ಕೇರಳ-ಕರ್ನಾಟಕ ರಾಜ್ಯಗಳ ಗಡಿ ಭಾಗವಾದ ಸಾರಡ್ಕ ಗೇಟ್ ನಿಂದ ಕೆಲವೇ ಹೆಜ್ಜೆ ದೂರದಲ್ಲಿ ಗುಂಪೊಂದು ಹೆದ್ದಾರಿಯಲ್ಲಿ ಸಹಾಯ ಕೇಳುವ ನೆಪದಲ್ಲಿ ವಾಹನಗಳನ್ನು ತಡೆದು ದರೋಡೆ ಮಾಡಲೆತ್ನಿಸಿದೆ. ಪ್ರತ್ಯಕ್ಷದರ್ಶಿಯೊಬ್ಬರು ಈ ಕುರಿತು ವಿಡಿಯೋ ಸಮೇತ ಸೋಷಿಯಲ್ ಮೀಡಿಯಾದಲ್ಲಿ ಜನರಿಗೆ ಎಚ್ಚರಿಸುವ ಕೆಲಸ ಮಾಡಿದ್ದಾರೆ.

ಜೂನ್ 14 ರಂದು ತಮಗೆ ಈ ಅನುಭವ ಆಗಿದೆ ಎಂದು ಅವರು ಹಂಚಿಕೊಂಡಿದ್ದಾರೆ. ರಾತ್ರಿ ಸುಮಾರು 10 ಗಂಟೆ ವೇಳೆಗೆ ಈ ರಸ್ತೆಯಲ್ಲಿ ಕಾರ್ ಮೂಲಕ ತೆರಳುವಾಗ ಕೆಲವು ಯುವಕರ ಗುಂಪು ಇತ್ತು. ಈ ಪೈಕಿ ಒಬ್ಬಾತ ಬಿದ್ದವನಂತೆ ನಟಿಸುತ್ತಿದ್ದ. ಮತ್ತೊಬ್ಬರು ಕಾರು ನಿಲ್ಲಿಸುವಂತೆ ಸನ್ನೆ ಮಾಡುತ್ತಿದ್ದಾರೆ. ಆದರೆ ಇವರ ಬಗ್ಗೆ ಅನುಮಾನಗೊಂಡು ಆ ವ್ಯಕ್ತಿ ಕಾರು ನಿಲ್ಲಿಸದೇ ಮುಂದೆ ನಡೆದಿದ್ದಾರೆ. ಆದರೆ ಮತ್ತೆ ಕಾರ್ ನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ನೋಡಿದಾಗ ಬಿದ್ದವನಂತೆ ನಟಿಸುತ್ತಿದ್ದವನು ಎದ್ದು ನಿಂತಿದ್ದು ಇದು ದುಷ್ಕೃತ್ಯ ನಡೆಸಲೆಂದೇ ಮಾಡುತ್ತಿರುವ ಸಂಚು ಎಂದು ಮನದಟ್ಟಾಗಿದೆ.

ಇದೇ ರೀತಿ ಅನುಭವ ತಮಗೂ ಆಗಿದೆ ಎಂದು ಮತ್ತೆ ಕೆಲವರೂ ಹಂಚಿಕೊಂಡಿದ್ದಾರೆ. ಹೀಗಾಗಿ  ಈ ರಸ್ತೆಯಲ್ಲಿ ದರೋಡೆಕೋರರ ಗುಂಪು ಆಕ್ಟಿವ್ ಆಗಿದೆಯೇನೋ ಎಂಬ ಸಂಶಯ ಮೂಡಿದೆ. ಈ ಬಗ್ಗೆ ಈಗ ಪೊಲೀಸರು ಸೂಕ್ತ ತನಿಖೆ ನಡೆಸಿ ಸಾರ್ವಜನಿಕರ ಆತಂಕ ನಿವಾರಸಿಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಟ್ಲ: ಸಾರಡ್ಕ ಚೆಕ್ ಪೋಸ್ಟ್ ಬಳಿ ರಾತ್ರಿ ಸಂಚರಿಸುವಾಗ ಹುಷಾರ್: ದರೋಡೆ ಗ್ಯಾಂಗ್ ವಿಡಿಯೋ ವೈರಲ್

ಬಿಗ್‌ಬಾಸ್‌ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಕೇಳಿಬಂತು ಗಂಭೀರ ಆರೋಪ: ಏನಿದು ವಂಚನೆ ಪ್ರಕರಣ

ಅಮುಲ್ ನಮ್ದೇ, ನಂದಿನಿನೂ ನಮ್ದೇ: ಧ್ವೇಷ ಯಾಕೆ ಮಾಡ್ತೀರಿ ಎಂದ ಸಿಟಿ ರವಿ

ಸೇವ್ ನಂದಿನಿ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಮೆಟ್ರೋದಲ್ಲಿ ಅಮೂಲ್ ಗೆ ಅವಕಾಶ ಕೊಟ್ಟಿತಾ

ನಮ್ಮ ಹಣದಿಂದಲೇ ವಿಧಾನಸೌಧ ನಿರ್ಮಾಣ ಮಾಡಿರೋದು ಪ್ರವೇಶ ಶುಲ್ಕ ಯಾಕೆ: ಮೋಹನ್ ದಾಸ್ ಪೈ

ಮುಂದಿನ ಸುದ್ದಿ
Show comments