Select Your Language

Notifications

webdunia
webdunia
webdunia
webdunia

ರಾಜ ರಘುವಂಶಿ ಗತಿ ನನಗಾಗಲಿಲ್ಲ.. ದೇವರೇ ಕಾಪಾಡಿದ..

Indore murder

Krishnaveni K

ಲಕ್ನೋ , ಬುಧವಾರ, 18 ಜೂನ್ 2025 (08:14 IST)
ಲಕ್ನೋ: ಇಂಧೋರ್ ನ ಹನಿಮೂನ್ ಮರ್ಡರ್ ಕೇಸ್ ಭಾರೀ ಸದ್ದು ಮಾಡುತ್ತಿರುವಾಗಲೇ ಉತ್ತರ ಪ್ರದೇಶದಲ್ಲಿ ನವವಿವಾಹಿತನೊಬ್ಬ ಸದ್ಯ ನನ್ನ ಗತಿ ಹೀಗಾಗಲಿಲ್ಲವಲ್ಲಾ ಎಂದು ದೇವರಿಗೆ ಧನ್ಯವಾದ ಸಲ್ಲಿಸಿದ್ದಾನೆ.

ಇಂಧೋರ್ ನ ರಾಜ ರಘುವಂಶಿಯನ್ನು ಆತನ ಪತ್ನಿಯೇ ಹನಿಮೂನ್ ಗೆಂದು ಮೇಘಾಲಯಕ್ಕೆ ಕರೆದೊಯ್ದು ಪ್ರಿಯಕರ ರಾಜ್ ಕುಶ್ವಾಹ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಳು. ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.

ಇದೀಗ ಉತ್ತರ ಪ್ರದೇಶದಲ್ಲೂ ಅಂತಹದ್ದೇ ಘಟನೆ ಆಗುವುದರಲ್ಲಿತ್ತು. ಉತ್ತರ ಪ್ರದೇಶದ ಬದನೌ ನಲ್ಲಿ ಮದುವೆಯಾದ 13 ದಿನಕ್ಕೇ ಪತ್ನಿ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು.  ಪೊಲೀಸರು ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಪತ್ತೆ ಮಾಡಿ ಪೊಲೀಸ್ ಠಾಣೆಗೆ ಕರೆತಂದಿದ್ದರು.

ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಪೊಲೀಸ್ ಠಾಣೆಯಲ್ಲಿ ನೋಡಿದ ಪತಿ ಕಣ್ಣೀರು ಹಾಕಿದ್ದಾನೆ. ಸದ್ಯ ದೇವರು ನನ್ನ ಬಚಾವ್ ಮಾಡಿದ. ಬಹುಶಃ ಅಕೆಯನ್ನು ಹನಿಮೂನ್ ಗೆ ಕರೆದೊಯ್ದಿದ್ದರೆ ನನ್ನನ್ನೂ ರಾಜ ರಘುವಂಶಿಯಂತೆ ಕೊಲೆ ಮಾಡುತ್ತಿದ್ದಳೇನೋ ಎಂದು ಪತಿ ಕಣ್ಣೀರು ಹಾಕುತ್ತಿದ್ದಾನೆ. ಪತ್ನಿಯ ಬಳಿ ಸದ್ಯ ನೀನು ಪ್ರಿಯಕರನೊಂದಿಗೆ ಓಡಿ ಹೋದೆ. ನನ್ನನ್ನು ಕೊಲೆ ಮಾಡಲಿಲ್ಲವಲ್ಲ ಎಂದು ಹೇಳಿ ಆಕೆಯನ್ನು ಅಲ್ಲಿಯೇ ಪ್ರಿಯಕರನ ಜೊತೆ ಬಿಟ್ಟು ಬಂದಿದ್ದಾನಂತೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಈ ಒಂದು ಜಿಲ್ಲೆಗೆ ಮಾತ್ರ ಇಂದು ಭಾರೀ ಮಳೆ