ಇಂಧೋರ್: ಗಂಡ ರಾಜ ರಘುವಂಶಿಯನ್ನು ಕೊಲೆ ಮಾಡಿದ ಸೋನಂ ಅದೊಂದು ವಸ್ತುವನ್ನು ಮಾತ್ರ ಬಿಟ್ಟು ಹೋಗಿದ್ದಳು. ಇದರಿಂದಲೇ ಪೊಲೀಸರು ಆಕೆಯ ಮೇಲೆ ಸಂಶಯಗೊಳ್ಳುವಂತೆ ಮಾಡಿತ್ತು.
ಮೇಘಾಲಯಕ್ಕೆ ಹನಿಮೂನ್ ಗೆಂದು ಪತಿ ರಾಜ ರಘುವಂಶಿಯನ್ನು ಕರೆದುಕೊಂಡು ಹೋಗಿ ಪ್ರಿಯಕರ ರಾಜ್ ಕುಶ್ವಾಹ ಮತ್ತು ಸಂಗಡಿಗರ ಸಹಾಯದೊಂದಿಗೆ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದ ಸೋನಂ ಬಳಿಕ ತಲೆ ಮರೆಸಿಕೊಂಡು ಲಾಡ್ಜ್ ಒಂದರಲ್ಲಿ ತಂಗಿದ್ದಳು.
ಇಲ್ಲಿಂದ ಹೋಗುವಾಗ ಆಕೆ ಮಾಂಗಲ್ಯ ಸರವನ್ನು ಬಿಟ್ಟು ಹೋಗಿದ್ದಳು. ಆಕೆ ಮಾಂಗಲ್ಯ ಸರವನ್ನು ಬಿಟ್ಟು ಹೋಗಿದ್ದರಿಂದ ಪೊಲೀಸರಿಗೆ ಆಕೆಯ ಮೇಲೆ ಅನುಮಾನ ಬಲಗೊಂಡಿತ್ತು. ಹೊಸದಾಗಿ ಮದುವೆಯಾದ ಯುವತಿ ಮಾಂಗಲ್ಯ ಬಿಟ್ಟುಹೋಗಿದ್ದು ಪೊಲೀಸರಿಗೆ ಅಚ್ಚರಿ ಉಂಟು ಮಾಡಿತ್ತು.
ಸೋನಂ ಹಂತಕರಿಗೆ ಹಣ ಕೊಡಲು ತನ್ನ ಸಂಬಂಧಿ ಜಿತೇಂದ್ರ ರಘುವಂಶಿಯ ಬ್ಯಾಂಕ್ ಖಾತೆಯನ್ನು ಬಳಸಿದ್ದಳು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಆತನ ಹೆಸರಿನಲ್ಲೇ ಸೋನಂ ಯುಪಿಐ ಖಾತೆಯಿದೆ ಎನ್ನಲಾಗಿದೆ. ಇದಕ್ಕೆ ನಿಖರ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.