Select Your Language

Notifications

webdunia
webdunia
webdunia
webdunia

ಸಾಹಸ ಸಿಂಹ ವಿಷ್ಣುವರ್ಧನ್ ಇದ್ದಿದ್ದರೆ ‘ಇದನ್ನು’ ನೋಡಿ ಎಷ್ಟು ಬೇಸರಪಟ್ಟುಕೊಳ್ಳುತ್ತಿದ್ದರೋ…!

ಸಾಹಸ ಸಿಂಹ ವಿಷ್ಣುವರ್ಧನ್ ಇದ್ದಿದ್ದರೆ ‘ಇದನ್ನು’ ನೋಡಿ ಎಷ್ಟು ಬೇಸರಪಟ್ಟುಕೊಳ್ಳುತ್ತಿದ್ದರೋ…!
ಬೆಂಗಳೂರು , ಬುಧವಾರ, 3 ಜನವರಿ 2018 (09:02 IST)
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಓದಿದ ಶಾಲೆಗೆ ಇದೀಗ ಬೀಗ ಬಿದ್ದಿದೆ. ಶಿಕ್ಷಕರಿಲ್ಲದೇ ಈ ಶಾಲೆಗೆ ಬೀಗ ಹಾಕುವ ಪರಿಸ್ಥಿತಿ ಬಂದಿದೆ.
 

ಸರ್ಕಾರವೇ ಕಳೆದ 10 ವರ್ಷಗಳಿಂದ ಈ ಶಾಲೆಗೆ ಶಿಕ್ಷಕರನ್ನು ನೇಮಿಸಿಲ್ಲ. ಹೀಗಾಗಿ ಶಾಲೆ ಮುಚ್ಚಬೇಕಾದ ಅನಿವಾರ್ಯತೆ ಬಂದಿದೆ. ವಿಷ್ಣುವರ್ಧನ್, ಹಿರಿಯ ಪೋಷಕ ನಟ ರಮೇಶ್ ಭಟ್ ಸೇರಿದಂತೆ ಇಂದು ಖ್ಯಾತನಾಮರಾಗಿರುವ ಹಲವರು ಓದಿದ ಶಾಲೆಯಿದು.

ಚಾಮರಾಜ ಪೇಟೆಯ 4 ನೇ ಮುಖ್ಯರಸ್ತೆಯಲ್ಲಿರುವ ಮಾಡೆಡಲ್ ಸ್ಕೂಲ್ ಎಜುಕೇಷನ್ ಸೊಸೈಟಿಯ ಪ್ರೌಢಶಾಲೆಯ ದುಃಸ್ಥಿತಿ ಇದು. 6 ರಿಂದ 8 ರವರೆಗೆ ತರಗತಿಗಳಲ್ಲಿ ಸುಮಾರು 80 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಇದೀಗ ಅವರನ್ನೆಲ್ಲಾ ಸಮೀಪದ ಶಾಲೆಗೆ ವರ್ಗಾಯಿಸಲಾಗಿದೆ.

ಕನ್ನಡ ಶಾಲೆಗಳ ಮೇಲೆ ಸರ್ಕಾರವೇ ಈ ರೀತಿ ಉದಾಸೀನ ಧೋರಣೆ ತಾಳುತ್ತಿರುವುದು ವಿಪರ್ಯಾಸ. ಇದೀಗ 1 ರಿಂದ 7 ರವರೆಗೆ ತರಗತಿಗಳಿವೆ. ಮುಂದಿನ ದಿನಗಳಲ್ಲಿ ಅದಕ್ಕೂ ಬೀಗ ಬೀಳಬಹುದು ಎಂದು ಶಾಲಾ ಆಡಳಿತ ಮಂಡಳಿ ಭೀತಿಯಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯಗೆ ಅರ್ಜೆಂಟಾಗಿ ಬೇಕಾಗಿದೆಯಂತೆ ಪಂಚೆ!