Select Your Language

Notifications

webdunia
webdunia
webdunia
webdunia

ಮೆಸ್ಕಾಂ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಯು.ಟಿ.ಖಾದರ್ ಆಪ್ತ

ಮೆಸ್ಕಾಂ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಯು.ಟಿ.ಖಾದರ್ ಆಪ್ತ
ಮಂಗಳೂರು , ಬುಧವಾರ, 29 ಜನವರಿ 2020 (11:03 IST)
ಮಂಗಳೂರು : ವಿದ್ಯುತ್ ಬಿಲ್ ಪಾವತಿಸದಕ್ಕೆ ಬಿಲ್ ಕೊಡಲು ಹೋದ ಮೆಸ್ಕಾಂ ಸಿಬ್ಬಂದಿಗಳ ಮೇಲೆ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಆಪ್ತ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಆಪ್ತ ಕಾಂಗ್ರೆಸ್ ಮುಖಂಡ ಅಮೀರ್ ಹಸನ್ ತುಂಬೆ ವಿದ್ಯುತ್ ಬಿಲ್ ಪಾವತಿಸದ ಹಿನ್ನಲೆಯಲ್ಲಿ  ಈ ಬಗ್ಗೆ ಪರಿಶೀಲನೆ ನಡೆಸಲು  ಮೆಸ್ಕಾಂ ಸಿಬ್ಬಂದಿಗಳು ಮಂಗಳೂರಿನ ದೇರಳಕಟ್ಟೆಯ ಬಳಿ ಇರುವ ಅಮೀರ್ ಹಸನ್ ತುಂಬೆ ಮನೆಗೆ ಹೋಗಿದ್ದಾರೆ. ಅಲ್ಲಿ ಪ್ಯೂಸ್ ತೆಗೆಯಲು ಹೋದಾಗ ಮೂವರ ಮೇಲೆ ಹಲ್ಲೆ ನಡೆಸಿದ್ದಾನೆ.

 

ಈ ದೃಶ್ಯವನ್ನು ಮೆಸ್ಕಾಂ ಸಿಬ್ಬಂದಿ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದು ಈಗ ವೈರಲ್ ಆಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಮೀರ್ ಬಂಧನಕ್ಕೆ ಬಲೆ ಬೀಸಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಗಲ್ಲು ತಪ್ಪಿಸಲು ನಿರ್ಭಯಾ ಅಪರಾಧಿಗಳಿಂದ ದಿನಕ್ಕೊಂದು ನಾಟಕ