Select Your Language

Notifications

webdunia
webdunia
webdunia
webdunia

ಮಂಗಳೂರು ಬಾಂಬ್ ಪ್ರಕರಣ: ಇಂದೂ ನಡೆಯಲಿದೆ ಸ್ಥಳ ಮಹಜರು

ಮಂಗಳೂರು ಬಾಂಬ್ ಪ್ರಕರಣ: ಇಂದೂ ನಡೆಯಲಿದೆ ಸ್ಥಳ ಮಹಜರು
ಮಂಗಳೂರು , ಶನಿವಾರ, 25 ಜನವರಿ 2020 (09:34 IST)
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿತ್ಯ ರಾವ್ ಜತೆ ಇಂದೂ ಕೂಡಾ ಪೊಲೀಸರು ಸ್ಥಳ ಮಹಜರು ನಡೆಸಲಿದ್ದಾರೆ.

 
ನಿನ್ನೆ ಮಂಗಳೂರು ವಿಮಾನ ನಿಲ್ದಾಣ, ಕೆಂಜಾರು ಜಂಕ್ಷನ್ ನಲ್ಲಿರುವ ಸೆಲೂನ್ ಗೆ ಸ್ಥಳ ಮಹಜರಿಗೆ ಆರೋಪಿಯನ್ನು ಕರೆದುಕೊಂಡು ಹೋಗಿದ್ದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರ ಮುಂದೆ ತಾನು ನಡೆಸಿದ ಕೃತ್ಯವನ್ನು ಆದಿತ್ಯ ರಾವ್ ಸವಿವರವಾಗಿ ಒಪ್ಪಿಕೊಂಡಿದ್ದಾನೆ.

ಇಂದೂ ಕೂಡಾ ಸ್ಥಳ ಮಹಜರು ಮುಂದುವರಿಯಲಿದ್ದು, ಕಾರ್ಕಳದ ರೆಸ್ಟೋರೆಂಟ್, ಬಲ್ಮಠದ ಹೋಟೆಲ್ ಮುಂತಾದೆಡೆ ಪರಿಶೀಲನೆ ನಡೆಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶದಿಂದ ಬಂದಿಳಿದ ಸಿಎಂ ಬಿಎಸ್ ವೈಗೆ ಹೊಸ ಸಂಕಟ