Select Your Language

Notifications

webdunia
webdunia
webdunia
webdunia

ಬಾಂಬರ್ ಆದಿತ್ಯ ರಾವ್ ಬಾಂಬ್ ಇಡಲು ಕಾರಣವೇನು ಗೊತ್ತಾ? ತನಿಖೆಯ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

ಬಾಂಬರ್ ಆದಿತ್ಯ ರಾವ್ ಬಾಂಬ್ ಇಡಲು ಕಾರಣವೇನು ಗೊತ್ತಾ? ತನಿಖೆಯ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
ಮಂಗಳೂರು , ಗುರುವಾರ, 23 ಜನವರಿ 2020 (10:31 IST)
ಮಂಗಳೂರು : ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ವೇಳೆ ಬಾಂಬರ್ ಆದಿತ್ಯ ರಾವ್ ಬಾಂಬ್ ಇಡಲು ಕಾರಣವೇನು ಎಂಬ ವಿಚಾರವನ್ನು ತಿಳಿಸಿದ್ದಾನೆ ಎನ್ನಲಾಗಿದೆ.

ಕೆಲಸ ನೀಡುವ ವಿಚಾರದಲ್ಲಿ ನನಗೆ ಭಾರೀ ಕಿರುಕುಳ ನೀಡಿದ್ದಾರೆ. ಆದಕಾರಣ ಏರ್ ಪೋರ್ಟ್  ಅಧಿಕಾರಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಬಾಂಬ್ ಇಟ್ಟಿರುವುದಾಗಿ ಪೊಲೀಸ್ ತನಿಖೆಯ ವೇಳೆ ಬಾಂಬರ್ ಆದಿತ್ಯ ರಾವ್ ಸತ್ಯ ಬಾಯ್ಬಿಟ್ಟಿದ್ದಾನೆ.

ಅಲ್ಲದೇ ಒಂದೇ ಬಾಂಬ್ ತಯಾರು ಮಾಡಿದ್ದು, ಇದಕ್ಕೆ ‘ಸಿಂಗಲ್ ಹ್ಯಾಂಡ್ ಆಪರೇಷನ್ ಏರ್ ಪೋರ್ಟ್’ ಹೆಸರಿಟ್ಟಿದ್ದನು. ಅಲ್ಲದೇ ಬಾಂಬ್ ನ ಮಾಸ್ಟರ್ ಮೈಂಡ್ ಈತ ಒಬ್ಬನೇ ಆಗಿದ್ದು,  ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳೇ ಅವನ ಟಾರ್ಗೆಟ್ ಎಂಬ ವಿಚಾರವನ್ನು ತಿಳಿಸಿದ್ದಾನೆ. ಅಲ್ಲದೇ  ಬಾಂಬ್ ತಯಾರಿಕೆಗೆ 100ಕ್ಕೂ ಹೆಚ್ಚು ಬಗೆಯ ಸಾಮಗ್ರಿ ಖರೀದಿಸಿದ್ದು, ವೆಬ್ ಸೈಟ್ ಮೂಲಕ ಬಾಂಬ್ ತಯಾರಿಸುವ ವಿಧಾನವನ್ನು ತಿಳಿದುಕೊಂಡಿದ್ದೇ ಎಂಬ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೆಬ್ರವರಿ 1 ಕ್ಕೂ ನಡೆಯಲ್ಲ ನಿರ್ಭಯಾ ಅಪರಾಧಿಗಳ ಗಲ್ಲು ಶಿಕ್ಷೆ! ಕಾರಣವೇನು ಗೊತ್ತಾ?