Publish Date: Tue, 21 Jan 2020 (16:21 IST)
Updated Date: Tue, 21 Jan 2020 (16:22 IST)
ಕೆಪಿಸಿಸಿಗೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಬೇಕು. ಹೀಗಂತ ಹರಿದಾಡುತ್ತಿರೋ ಸುದ್ದಿಗಳಿಗೆ ಸಿದ್ದರಾಮಯ್ಯ ಹೊಸ ಬಾಂಬ್ ಹಾಕಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಮೇಲೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಬೇಕು ಅಂತ ನಾನು ಒತ್ತಡ ಹಾಕೇ ಇಲ್ಲ. ಹೀಗಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೈ ಪಡೆಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಅನ್ನೋದು ಇದ್ದೇ ಇದೆ. ಎಲ್ಲ ಮುಖಂಡರೂ ತಮಗೆ ಸರಿಕಂಡಿದ್ದನ್ನು ಹೇಳಬಹುದು. ಹಾಗಾಗಿ ನಾನೂ ನನ್ನ ಅಭಿಪ್ರಾಯವನ್ನು ಹೇಳಿ ಬಂದಿದ್ದೇನೆ ಅಂದಿದ್ದಾರೆ.
ಎಲ್ಲ ಮುಖಂಡರ ಅಭಿಪ್ರಾಯ ಕೇಳಿ ಹೈಕಮಾಂಡ್ ತನ್ನದೇ ಆದ ನಿರ್ಧಾರ ಕೈಗೊಳ್ಳುತ್ತದೆ ಅಂತಾನೂ ಸಿದ್ದರಾಮಯ್ಯ ಹೊಸ ಬಾಂಬ್ ಹಾಕಿದ್ದು, ಇದರಿಂದ ಕಾಂಗ್ರೆಸ್ ನಲ್ಲಿ ಮತ್ತೆ ಹೊಸ ಚರ್ಚೆ ಆರಂಭಗೊಂಡಿದೆ.