Publish Date: Tue, 25 Jul 2023 (15:03 IST)
Updated Date: Tue, 25 Jul 2023 (14:05 IST)
ಸರ್ಕಾರದ ಗ್ಯಾರಂಟಿಗೆ ವ್ಯಾರಂಟಿನೆ ಇಲ್ಲವಾಯ್ತ?ಅನ್ನುವ ಪ್ರಶ್ನೆ ಕಾಡತೊಡಗಿದೆ.ಸರ್ಕಾರದ ಗ್ಯಾರಂಟಿ ಪಡೆಯಲು ಸಮಸ್ಯೆ ಗ್ಯಾರಂಟಿಯಾಗಿದೆ.ಅರ್ಜಿ ಸಲ್ಲಿಕೆಗೆ ಮೆಸೇಜ್ ಬರದೇ ಜನ ಸುಸ್ತಾಗಿದ್ದಾರೆ.ಮೊಬೈಲ್ ಗೆ ಮೆಸೇಜ್ ಬರಲು ಹೆಲ್ಪ್ ಲೈನ್ ನಂಬರ್ ವರ್ಕ್ ಆಗದೇ ಪರದಾಟ ನಡೆಸ್ತಿದ್ದಾರೆ.ಎಷ್ಟು ಬಾರಿ ಮಿಸ್ ಕಾಲ್ ಕೊಟ್ಟರು ಮೆಸೇಜ್ ಬರ್ತಿಲ್ಲ.ಹೀಗಾಗಿ ಕಂಗಾಲಾಗಿ ಜನ ಬೆಂಗಳೂರು ಒನ್ ಕೇಂದ್ರಕ್ಕೆ ಬಂದಿದ್ದಾರೆ.ನಂಬರ್ ಸರಿಯಾಗಿ ಕೆಲಸ ಮಾಡ್ತಿಲ್ಲ ಅಂತಾ ಆರೋಪ ಮಾಡ್ತಿದ್ದಾರೆ.ಹೀಗಾದ್ರೆ ಅರ್ಜಿ ಹಾಕೋದು ಹೇಗೆ ಅಂತಾ ಜನರ ಕಿಡಿಕಾರಿದ್ದಾರೆ.ಗೃಹಲಕ್ಷ್ಮೀ ನಂಬರ್ ನಿಂದ ಹಿರಿಯ ನಾಗರಿಕರಿಗೂ ಸಮಸ್ಯೆಯಾಗಿದೆ.ಗೃಹಲಕ್ಷ್ಮೀ ಯಡವಟ್ಟಿನಿಂದ ಜನರು ಕಂಗಾಲಾಗಿದ್ದಾರೆ.