Select Your Language

Notifications

webdunia
webdunia
webdunia
webdunia

ಸ್ವಗ್ರಾಮಕ್ಕೆ ಆಗಮಿಸಿದ ಕೈಶಾಸಕ ಉಮೇಶ್ ಜಾಧವ

ಸ್ವಗ್ರಾಮಕ್ಕೆ ಆಗಮಿಸಿದ ಕೈಶಾಸಕ ಉಮೇಶ್ ಜಾಧವ
ಕಲಬುರಗಿ , ಗುರುವಾರ, 24 ಜನವರಿ 2019 (14:58 IST)
ಸಚಿವ ಸ್ಥಾನ ಸಿಗದಿದ್ದಕ್ಕೆ ಮುನಿಸಿಕೊಂಡು ಒಂದು ವಾರಕ್ಕೂ ಹೆಚ್ಚುದಿನ ಮುಂಬೈನಲ್ಲಿ ವಾಸವಿದ್ದ ಉಮೇಶ್ ಜಾಧವ್
ಸ್ವ ಗ್ರಾಮಕ್ಕೆ ಆಗಮಿಸಿದ್ದಾರೆ.

ಕಾಂಗ್ರೆಸ್ ಅತೃಪ್ತ ಶಾಸಕ ಉಮೇಶ್ ಜಾಧವ್ ಸಚಿವ ಸ್ಥಾನ ಸಿಗದಿದ್ದಕ್ಕೆ ಮುನಿಸಿಕೊಂಡು ಒಂದು ವಾರಕ್ಕೂ ಹೆಚ್ಚುದಿನ ಮುಂಬೈನಲ್ಲಿ ವಾಸವಿದ್ದರು. ಅವರು ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಉಮೇಶ್ ಜಾಧವ್ ಕಲಬುರ್ಗಿ ಜಿಲ್ಲೆ ಚಿಂಚೋಳಿ ಮತ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಗೈರು ಹಾಜರಾಗಿದ್ದ ಶಾಸಕ ಉಮೇಶ್ ಜಾಧವ್, ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಚಿಂಚೋಳಿ ತಾಲೂಕಿನ ಬೆಡಸೂರ ತಾಂಡಾಕ್ಕೆ ಆಗಮಿಸಿದ್ದಾರೆ. ಇಂದು ಅವರ ತಂದೆ ಗೋಪಾಲರಾವ್ ಜಾಧವ್ ಅವರ ಪುಣ್ಯತಿಥಿ ದಿನ ಇದೆ. ಈ ಹಿನ್ನೆಲೆ ಸ್ವ ಗ್ರಾಮಕ್ಕೆ ಶಾಸಕರು ಆಗಮಿಸಿದ್ದಾರೆ. ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮುಂದಿನ ರಾಜಕೀಯ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.



Share this Story:

Follow Webdunia kannada

ಮುಂದಿನ ಸುದ್ದಿ

ರೈತರಿಗೆ ಬ್ಯಾಂಕ್ ನೋಟಿಸ್: ಮಾಜಿ ಶಾಸಕರ ಸಹೋದರನಿಂದ ಗೋಲ್ ಮಾಲ್ ಶಂಕೆ!