Webdunia - Bharat's app for daily news and videos

Install App

ಜೈಲಿನಲ್ಲಿದ್ರೂ ಡ್ಯಾಮೆಜ್ ಕಂಟ್ರೋಲ್ ಗೆ ಯತ್ನ

Webdunia
ಮಂಗಳವಾರ, 18 ಜುಲೈ 2023 (14:51 IST)
ನಿಶಾ ನರಸಪ್ಪ ಚೀಟಂಗ್ ಕಥೆ ಸಣ್ಣದೇನಿಲ್ಲ ಬಿಡಿ.. ದಿನದಿಂದ ದಿನಕ್ಕೆ ನಿಶಾಳ ವಂಚನೆ ಕಥೆಗಳು ಒಂದೊಂದೆ ಹೊರ ಬರ್ತಿವೆ.. ಬರೀ ಬೆಂಗಳೂರು ಅಷ್ಟೇ ಅಲ್ಲಾ ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲಗಳಲ್ಲೂ ಈಕೆ ವಿರಿದ್ದ ದೂರು ದಾಖಲಾಗ್ತಿದೆ.. ರಾಜ್ಯದ ಹಲವೆಡೆ ವಂಚನೆ ಜಾಲ ಹೆಚ್ಚಿಸಿದ್ದ ನಿಶಾ ಬಳಸಿಕೊಂಡಿದ್ದು ವಂಶಿಕಾ ಹೆಸ್ರು ಮಾತ್ರ ಅಲ್ಲ.. ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಹೆಸ್ರೂ ಹೇಳಿರೋದು ಗೊತ್ತಾಗಿದೆ.

ಈಕೆಯನ್ನ ನಂಬಿ ಪೋಷಕರು ಹೇಗೆಲ್ಲಾ ಲಕ್ಷ ಲಕ್ಷ ಹಣ ಕೊಡ್ತಿದ್ರು ಅನ್ನೋ ಡೌಟ್ ಎಲ್ರಿಗೂ ಇದ್ದೇ ಇರುತ್ತೆ.. ಅದಕ್ಕೆ ರೀಸನ್ ಈಕೆ ಬಳಸ್ತಿದ್ದ ಹೆಸ್ರುಗಳು.. ಈಕೆ ಮಾತಾಡ್ತಿದ್ದ ರೀತಿ.. ಮಾಸ್ಟರ್ ಆನಂದ್ ಹೆಸ್ರು ಅಷ್ಟೇ ಅಲ್ಲ ಗೋಲ್ಡನ್ ಸ್ಟಾರ್ ಗಣೇಶ್ ಹೆಸ್ರೂ ಬಳಸಿ ನಿಶಾ ನರಸಪ್ಪ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಆಡಿಯೋ ಒಂದರಲ್ಲಿ ಗೋಲ್ಡನ್ ಸ್ಟಾರ್ ಜೊತೆ ಸಿನಿಮಾ ಮಾಡೋ ಪ್ಲಾನ್ ನಡೀತಿದೆ.. ಅದ್ರಲ್ಲಿ ನಿಮ್ಮ ಮಕ್ಕಳಿಗೂ ಆ್ಯಕ್ಟಿಂಗ್ ಚಾನ್ಸ್ ಕೊಡಿಸ್ತೀವಿ ಅಂತಾ ನಿಶಾ ಮಾತನಾಡಿರೋ ಆಡಿಯೋ ಒಂದು ವೈರಲ್ ಆಗಿದೆ.

ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ ಗಳ ಹೆಸ್ರು ಬಳಸ್ತಿದ್ದ ನಿಶಾ ಹೆಂಗೋ ರೀಲ್ ಬಿಟ್ಟು.. ಕೆಲ ಕಾರ್ಯಕ್ರಮಗಳಿಗೆ ಇನ್ವೈಟ್ ಮಾಡಿ ಹಣ ಈಸ್ಕೋತಿದ್ಳು.. ಎಲ್ಲರತ್ತಿ ಕ್ಯಾಶನ್ನೇ ಹೆಚ್ಚು ಕಲೆಕ್ಟ್ ಮಾಡ್ತಿದ್ದ ನಿಶಾ ಹಣ ಅಕೌಂಟ್ ಗೆ ಬಂದಿದ್ದೇ ತಡ ತನ್ನಾಟ ಶುರು ಮಾಡಿದ್ಳು.. ತನ್ನ ಕಂಪನಿ ಲಾಸ್ ಆಗಿದೆ.. ಆಗೆ ಹೀಗೆ ಕಥೆ ಕಟ್ತಿದ್ದ ನಿಶಾ ಹಣ ಕೇಳಿದೋರಿಗೆ ಅವಾಜ್ ಹಾಕಿ ಏನ್ ಕೇಸ್ ಹಾಕ್ತೀರೋ ಹಾಕೊಳ್ಳಿ ಅಂತಾ ಅವಾಜ್ ಕೂಡ ಹಾಕಿ ತಪ್ಪಿಸಿಕೊಳ್ತಿದ್ಳು.ಇನ್ನು ಇಷ್ಟೆಲ್ಲಾ ಆಗಿ ನಿಶಾ ಜೈಲಿನಲ್ಲಿದ್ರೂ ತನ್ನಾಟಕ್ಕೆ ಬ್ರೇಕ್ ಕೊಡೋ ಹಾಗೆ ಕಾಣಿಸ್ತಿಲ್ಲ.. ಇವತ್ತು ಮಧ್ಯಾಹ್ನದ ಸುಮಾರಿಗೆ ಇನ್ಸ್ಟಾಗ್ರಾಮ್ ಮೂಲಕ ಮತ್ತೆ ಡ್ಯಾಮೇಜ್ ಕಂಟ್ರೋಲ್ ಗೆ ಟ್ರೈ ಮಾಡಿದ್ದಾಳೆ.. ನನ್ನ ಮೇಲಿನ ಆರೋಪಕ್ಕೆ ಸ್ಪಷ್ಟನೆ ಕೊಡ್ತೀನಿ.. ತನಿಖೆ ನಡೀತಿದೆ ಎಲ್ಲದಕ್ಕೂ ಸ್ಪಷ್ಟನೆ ನೀಡ್ತೀನಿ ಅಂತಾ ಪೋಸ್ಟ್ ಮಾಡಿದ್ದಾಳೆ.. ಅಷ್ಟೇ ಅಲ್ಲ ಹೊಸದಾಗಿ ಫೋಟೋಶೂಟ್ ಗೆ ರಿಜಿಸ್ಟರ್ ಮಾಡಿಕೊಳ್ಳಿ ನನ್ನ ಸಿಬ್ಬಂದಿಯನ್ನ ಕಾಂಟ್ಯಾಕ್ಟ್ ಮಾಡಿ ಅಂತಾನೂ ಪೋಸ್ಟ್ ಮಾಡಿದ್ದಾಳೆ.ಸದ್ಯ ನಿಶಾ ವಂಚನೆಯ ಒಂದೊಂದು ಕಥೆಗಳು ದಿನಕಳೆದಂತೆ ಬಯಲಾಗುತ್ತಲೇ ಇದೆ.. ಇನ್ನೂ ಈಕೆ ವಿರುದ್ದ ಸಾಲು ಸಾಲು ದೂರುಗಳು ಠಾಣೆಗಳಿಗೆ ಬರುತ್ತಲೇ ಇವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ: 15 ಶವ ಹೂತಿಟ್ಟ ಸ್ಥಳವನ್ನು ಗುರುತಿಸಿದ ದೂರುದಾರ, ಪ್ರದೇಶಕ್ಕೆ ಗನ್‌ಮ್ಯಾನ್ ಭದ್ರತೆ

ನಾಳೆ ನಾಗರಪಂಚಮಿ: ನಾಗದೋಷಗಳಿಗೆ ಈ ದಿನ ವಿಶೇಷ ಪೂಜೆ ನೆರವೇರಿಸಿದ್ರೆ ದೂರವಾಗುತ್ತೆ ಸಂಕಷ್ಟ

ಕಾಲ್ತುಳಿತ ಪ್ರಕರಣ: 52 ದಿನಗಳ ಬಳಿಕ ಬಿ ದಯಾನಂದ್ ಸೇರಿ ನಾಲ್ವರು ಪೊಲೀಸ್ ಅಧಿಕಾರಿ ಅಮಾನತು ಹಿಂಪಡೆದ ಸರ್ಕಾರ

ಯೂರಿಯಾ ಕೊರತೆ ವಿಚಾರದಲ್ಲಿ ಬಿಜೆಪಿಗೆ ಸವಾಲೆಸೆದ ಕೃಷಿ ಸಚಿವ ಚಲುವರಾಯಸ್ವಾಮಿ

ಬ್ಯಾಂಕಾಕ್‌ನ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: ದಾಳಿಕೋರ ಸೇರಿ 6 ಮಂದಿ ಸಾವು

ಮುಂದಿನ ಸುದ್ದಿ
Show comments