Select Your Language

Notifications

webdunia
webdunia
webdunia
webdunia

ವ್ಯಕ್ತಿಯ ಕೈ- ಕಾಲು ಕಟ್ಟಿ ದರೋಡೆ

ವ್ಯಕ್ತಿಯ ಕೈ-  ಕಾಲು ಕಟ್ಟಿ ದರೋಡೆ
ಮಂಡ್ಯ , ಶುಕ್ರವಾರ, 14 ಡಿಸೆಂಬರ್ 2018 (17:39 IST)
ವ್ಯಕ್ತಿಯೋರ್ವನ ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ದರೋಡೆ ಮಾಡಿರುವ ಘಟನೆ ನಡೆದಿದೆ.

ವ್ಯಕ್ತಿಯೋರ್ವನ ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದ ಕೃಷ್ಣೇಗೌಡ ಎಂಬುವರ ಮನೆಗೆ ತಮ್ಮ ಮಗ ಪ್ರಸನ್ನನ ಸ್ನೇಹಿತರು ಎಂದು ಹೇಳಿಕೊಂಡು ನಾಲ್ವರು ದುಷ್ಕರ್ಮಿಗಳು ಹೋಗಿದ್ದಾರೆ. ಹೀಗೆ ಹೋದ ನಾಲ್ವರು ದುಷ್ಕರ್ಮಿಗಳು, ಕೃಷ್ಣೇಗೌಡರ ಕೈಕಾಲನ್ನು  ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಬಳಿಕ ಬೀರುನಲ್ಲಿದ್ದ 1 ಲಕ್ಷದ 20 ಸಾವಿರ ನಗದು, 50 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಮೈಲಾರ ಕ್ಷೇತ್ರಕ್ಕೆ ಮದ್ಯವ್ಯಸನಿ ಕಾರ್ಣಿಕ ನೇಮಕ?