Select Your Language

Notifications

webdunia
webdunia
webdunia
webdunia

ಒಂದೇ ಲವ್ ಸ್ಟೋರಿಗೆ ಮೂವರ ದಾರುಣ ಸಾವು

ಒಂದೇ ಲವ್ ಸ್ಟೋರಿಗೆ ಮೂವರ ದಾರುಣ ಸಾವು
ಮಂಡ್ಯ , ಬುಧವಾರ, 23 ಅಕ್ಟೋಬರ್ 2019 (14:45 IST)

ಲವ್ ವಿಷಯ ಹುಡುಗಿ ಮನೆಯಲ್ಲಿ ಗೊತ್ತಾಗಿದ್ದಕ್ಕೆ ಮೂವರು ಸಾವನ್ನಪ್ಪಿದ್ದಾರೆ.

ಕಾಂಚನ, ಯಶ್ವಂತ ಲವ್ ಮಾಡೋ ವಿಷಯ ಕಾಂಚನಳ ಮನೆಯಲ್ಲಿ ಗೊತ್ತಾಗಿದೆ. ಹೀಗಾಗಿ ಕಾಂಚನ ವಿಷ ಸೇವಿಸಿ ಆ ಬಳಿಕ ನೇಣಿಗೆ ಶರಣಾಗಿ, ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದಾಳೆ.

ಮೊಮ್ಮಗಳ ಲವ್ ವಿಷಯ ಹಾಗೂ ಸಾವನ್ನು ನೋಡಿದ ಅಜ್ಜ ಚಂದ್ರಪ್ಪನಿಗೆ ಹೃದಯಾಘಾತವಾಗಿದೆ.

ಇತ್ತ, ಘಟನೆಗೆ ಕಾಂಚನಳ ಲವರ್ ಯಶ್ವಂತ್ ಕಾರಣ ಅಂತ ದೂರು ದಾಖಲಾಗಿದ್ದೇ ತಡ, ಪೊಲೀಸರು ಯಶ್ವಂತ್ ನನ್ನು ಬಂಧನ ಮಾಡಿದ್ದಾರೆ. ಇದರಿಂದ ಮನನೊಂದ ಯಶ್ವಂತ್ ನ ತಂದೆ ಸೋಮಶೇಖರ್ ಮಾನಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಂಡ್ಯದ ಬೆಳ್ಳೂರಿನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಪಿಎಸ್ ಐ ವಿರುದ್ಧ ಜೆಡಿಎಸ್ ಉಗ್ರ ಪ್ರತಿಭಟನೆ: ಹೆಚ್.ಡಿ.ದೇವೇಗೌಡ ಸಾಥ್