Select Your Language

Notifications

webdunia
webdunia
webdunia
webdunia

ಜಾತ್ಯಾತೀತ ಪಕ್ಷಗಳ ರಾಜ್ಯ ಸರ್ಕಾರ ಸುಭದ್ರವಾಗಿದೆ ಎಂದ ಸಚಿವ

ಜಾತ್ಯಾತೀತ ಪಕ್ಷಗಳ ರಾಜ್ಯ ಸರ್ಕಾರ ಸುಭದ್ರವಾಗಿದೆ ಎಂದ ಸಚಿವ
ಚಾಮರಾಜನಗರ , ಶನಿವಾರ, 13 ಅಕ್ಟೋಬರ್ 2018 (14:38 IST)
ಜಾತ್ಯಾತೀತ ಪಕ್ಷಗಳ ರಾಜ್ಯ ಸರ್ಕಾರ ಸುಭದ್ರವಾಗಿದೆ ಎಂದು ಸಚಿವ ಹೇಳಿದ್ದಾರೆ.

ಚಾಮರಾಜನಗರದಲ್ಲಿ ಮಾತನಾಡಿರುವ ಸಚಿವ ಪುಟ್ಟರಂಗಶೆಟ್ಟಿ, ಎನ್.ಮಹೇಶ್ ಅವರು ಕಾರ್ಯಕರ್ತರ ಅಭಿಪ್ರಾಯ ಪಡೆದು ರಾಜಿನಾಮೆ ಕೊಡಬೇಕಿತ್ತು ಎಂದು ಶಿಕ್ಷಣ ಸಚಿವ ಎನ್. ಮಹೇಶ್ ರಾಜಿನಾಮೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಿ. ಪುಟ್ಟರಂಗಶೆಟ್ಟಿ ಹೇಳಿಕೆ ನೀಡಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ  ಇನ್ನೂ ಸಾಕಷ್ಟು ಕೆಲಸವಿತ್ತು. ನಾನು ಸಹ ಕೆಲ ಶಾಲಾ- ಕಾಲೇಜುಗಳ ಬಗ್ಗೆ ಪ್ರಸ್ತಾಪಿಸಿದ್ದೆ.
ಬಿಎಸ್ ಪಿ ಹೈಕಮಾಂಡ್ ನಿರ್ದೇಶನದಂತೆ ಸಚಿವ ಸ್ಥಾನಕ್ಕೆ ಮಹೇಶ್ ರಾಜಿನಾಮೆ ನೀಡಿರಬಹುದು ಎಂದರು.

ಈ ಬೆಳವಣಿಗೆಯಿಂದ ಸಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಕೋಮುವಾದಿ ಬಿಜೆಪಿಯನ್ನ ದೂರ ಇಡಲು ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್ ಮತ್ತು ಬಿಎಸ್ ಪಿ ಸೇರಿ ಸರ್ಕಾರ ರಚಿಸಿವೆ. ಜಾತ್ಯಾತೀತ ಪಕ್ಷಗಳ ರಾಜ್ಯ ಸರ್ಕಾರ ಸುಭದ್ರವಾಗಿದೆ ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ನವರಾತ್ರಿಗಾಗಿ ನರ್ತಿಸಿದ ವಿದ್ಯಾರ್ಥಿನಿಯರು