Publish Date: Wed, 20 Nov 2019 (19:24 IST)
Updated Date: Wed, 20 Nov 2019 (19:26 IST)
ಕಣ್ಣು ಕಾಣದ ಅಂಧ ವಿದ್ಯಾರ್ಥಿಯನ್ನು ಪೊಲೀಸರು ಹಿಗ್ಗಾ ಮುಗ್ಗಾ ಲಾಠಿಗಳಿಂದ ಥಳಿಸಿರೋ ಘಟನೆ ನಡೆದಿದೆ.
ಜೆಎನ್ ಯು ವಿದ್ಯಾರ್ಥಿ ಎಐಐಎಂಎಸ್ ಥ್ರೋಮಾ ಸೆಂಟರ್ ಬಳಿ ನಡೆಯುತ್ತಿದ್ದ ಪ್ರತಿಭಟನೆಯಲ್ಲ ಪಾಲ್ಗೊಂಡಿದ್ದನು ಅಂಧ ವಿದ್ಯಾರ್ಥಿ.
ನನಗೆ ಕಣ್ಣು ಕಾಣೋದಿಲ್ಲ ಅಂಧನಾಗಿರುವೆ ಅಂತ ಪೊಲೀಸರ ಬಳಿ ವಿದ್ಯಾರ್ಥಿ ಹೇಳಿಕೊಂಡಿದ್ದಾನೆ.
ಆ ಅಂಧ ವಿದ್ಯಾರ್ಥಿಯನ್ನು ಲಾಠಿಗಳಿಂದ ಥಳಿಸಿರೋ ಪೊಲೀಸರು, ಅಂಧ ಆಗಿದ್ದರೆ ಪ್ರತಿಭಟನೆಯಲ್ಲಿ ಯಾಕೆ ಭಾಗಿಯಾಗಿರುವೆ ಅಂತ ಮರು ಪ್ರಶ್ನೆ ಮಾಡಿ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.