Select Your Language

Notifications

webdunia
webdunia
webdunia
webdunia

ಕೋಟೆನಾಡಿನ ಜನರಿಗೆ ಶುರುವಾದ ಹೊಸ ಕಿರಿಕಿರಿ

ಕೋಟೆನಾಡಿನ ಜನರಿಗೆ ಶುರುವಾದ ಹೊಸ ಕಿರಿಕಿರಿ
ಚಿತ್ರದುರ್ಗ , ಶುಕ್ರವಾರ, 7 ಡಿಸೆಂಬರ್ 2018 (18:23 IST)
ಕೋಟೆನಾಡಿನ ಜನರಿಗೆ ಕಳೆದ ಇಪ್ಪತ್ತು ದಿನಗಳಿಂದ ಹೊಸ ಕಿರಿಕಿರಿಯೊಂದು ಶುರುವಾಗಿದೆ.

ಚಿತ್ರದುರ್ಗ ಜಿಲ್ಲೆಯ ಜನರಿಗೆ ರಸ್ತೆ ಕಾಮಗಾರಿಯಿಂದ ಕಿರಿಕಿರಿ ಆರಂಭಗೊಂಡಿದೆ. ಚಿತ್ರದುರ್ಗ ನಗರದ ಜಿಲ್ಲಾಧಿಕಾರಿ ಕಛೇರಿ ಮುಂದೆ ಓಬವ್ವ ವೃತ್ತದ ಅಗಲೀಕರಣ ಮತ್ತು ರಸ್ತೆ ಕಾಮಗಾರಿಯು ನಡೆಯುತ್ತಿದೆ. ಕಳೆದ 20 ದಿನಗಳಿಂದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ.

ಈ ರಸ್ತೆಯಲ್ಲಿ ದಿನಾಲೂ ಡಾಂಬರ್ ಮತ್ತು ಕಾಂಕ್ರಿಟ್ ಹಾಕುತ್ತಿರುವುದರಿಂದ  ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರರಿಗೆ ಅಪಾರ ತೊಂದರೆ ಉಂಟಾಗುತ್ತಿದೆ. ನಗರದ ಬಹಳಷ್ಟು ರಸ್ತೆಗಳನ್ನು ಸೇರುವ ರಸ್ತೆ ಇದಾಗಿದೆ. ಕಾಮಗಾರಿಯು ಬೇಗ ಮುಗಿಯಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ವ್ಯಾಪಕ ಹಗರಣಕ್ಕೆ ಖಂಡನೆ: 7ನೇ ದಿನಕ್ಕೆ ಮುಂದುವರಿದ ಸತ್ಯಾಗ್ರಹ