Select Your Language

Notifications

webdunia
webdunia
webdunia
webdunia

ವಾಸ್ತುಪ್ರಕಾರ ಮತ ಚಲಾಯಿಸಿದ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು

ವಾಸ್ತುಪ್ರಕಾರ ಮತ ಚಲಾಯಿಸಿದ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು
ಮಂಡ್ಯ , ಗುರುವಾರ, 5 ಡಿಸೆಂಬರ್ 2019 (10:39 IST)
ಮಂಡ್ಯ : ಅನರ್ಹ ಶಾಸಕರ ರಾಜೀನಾಮೆಯಿಂದ ತೆರವುಗೊಂಡ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಈ ವೇಳೆ ಕೆ.ಆರ್ ಪೇಟೆ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಅವರು ವಾಸ್ತುಪ್ರಕಾರ ತಮ್ಮ ಮತ ಚಲಾಯಿಸಿದ್ದಾರೆ.



ಕೆ.ಆರ್ ಪೇಟೆ ತಾಲೂಕಿನ ಬಂಡಿಹೊಳೆ ಮತಗಟ್ಟೆ ಸಂಖ್ಯೆ 151ರಲ್ಲಿ ಕುಟುಂಬ ಸಮೇತರಾಗಿ ಆಗಮಿಸಿದ ದೇವರಾಜು ಅವರು ಮತದಾನ ಮಾಡುವ ಮೊದಲು ಚುನಾವಣಾ ಸಿಬ್ಬಂದಿ ಮಂತ್ರಯಂತ್ರವಿಟ್ಟ ವಾಸ್ತು ಸರಿಯಿಲ್ಲ ಎಂದು ಅದನ್ನು ವಾಸ್ತುಪ್ರಕಾರ ತಿರುಗಿಸಿಡಲು ಹೇಳಿ ಬಳಿಕ ಮತದಾನ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಎಲ್ಲಾ ಅನರ್ಹ ಶಾಸಕರ ಅಜ್ಞಾತವಾಸ ಇಂದಿಗೆ ಅಂತ್ಯವಾಗಲಿದೆ- ಡಾ.ಕೆ.ಸುಧಾಕರ್ ವಿಶ್ವಾಸ