Select Your Language

Notifications

webdunia
webdunia
webdunia
webdunia

ಪುನೀತ್ ರಾಜ್ ಕುಮಾರ್ ಜೀವಕ್ಕೆ ತೊಂದರೆ ಎಂದು 2 ವರ್ಷದ ಹಿಂದೆ ಭವಿಷ್ಯ ನುಡಿದ ಅಜ್ಜಯ್ಯ

ಪುನೀತ್ ರಾಜ್ ಕುಮಾರ್ ಜೀವಕ್ಕೆ ತೊಂದರೆ ಎಂದು 2 ವರ್ಷದ ಹಿಂದೆ ಭವಿಷ್ಯ ನುಡಿದ ಅಜ್ಜಯ್ಯ
bangalore , ಭಾನುವಾರ, 31 ಅಕ್ಟೋಬರ್ 2021 (20:59 IST)
ಪುನೀತ್ ರಾಜ್ ಕುಮಾರ್ ಜೀವಕ್ಕೆ ತೊಂದರೆಯಾಗೋದಾಗಿ 2 ವರ್ಷ ಮುಂಚೆಯೇ ಅಜಯ್ಯ ಭವಿಷ್ಯ ನುಡಿದಿದ್ದರು.
 
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕುರುಬರಹಳ್ಳಿ ಅಜ್ಜಯ್ಯನ ಗದ್ದುಗೆಯಲ್ಲಿ ಗುದ್ದಲಿಶ್ವರ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದರು.
 
 
ಕಳೆದ ಎರಡು ವರ್ಷದ ಹಿಂದೆ ಪುನೀತ್ ಅವರು ರೆಡ್ ಮೂನ್ ದಿನ ಗದ್ದುಗೆಯಲ್ಲಿ ಉಳಿದು ಪೂಜೆ ಸಲ್ಲಿಸಿದ್ದರು. ಈ ವೇಳೆ ದೇಹದ ರೋಗ ಲಕ್ಷಣ ಹಾಗೂ ಜೀವಕ್ಕೆ ತೊಂದರೆ ಇರೋ ಬಗ್ಗೆ ಶ್ರೀಗಳು ಭವಿಷ್ಯ ನುಡಿದಿದ್ದರು.
 
ಧರ್ಮಪತ್ನಿ ಅಶ್ವಿನಿಯೊಂದಿಗೆ ಆಗಮಿಸಿದ್ದ ಪುನೀತ್, ಅಜ್ಜಯ್ಯ‌ನ ದಂಡವನ್ನು ಮನೆಯಲ್ಲಿಟ್ಟು ಪೂಜಿಸಿದ್ದರು. ಅಜ್ಜಯ್ಯನ ಮನೆಗೆ ಕರೆದೊಯ್ದು ಪೂಜೆ ಸಲ್ಲಿಸಿದ್ದರು. ಇದಕ್ಕಾಗಿ ಅವರು ಮಾಂಸಹಾರ ಸೇವನೆಯನ್ನು ತ್ಯಜಿಸಿದ್ದರು.
 
ಪ್ರತಿವರ್ಷ ಪೂಜೆ ಸಲ್ಲಿಸುವಂತೆ ಶ್ರೀಗಳು ತಿಳಿಸಿದ್ದರು. ಕೆಲಸದ ಒತ್ತಡದಿಂದ ಪೂಜೆ ಸಲ್ಲಿಸಲು ಮರೆತು ಹೋದ್ರಾ ಅನ್ನೋ ಪ್ರಶ್ನೆ ಕಾಡುತ್ತಿದೆ.
 
ರೆಡ್ ಮೂನ್ ದಿನ ಆ ಸ್ಥಳದಲ್ಲಿದ್ದು ಪೂಜೆ ಸಲ್ಲಿಸಿದ್ದ ಪುನೀತ್ ಆರೋಗ್ಯ ಚೇತರಿಕೆಯಾಗಿತ್ತು. ಮತ್ತೇ ಆ ಪೂಜೆ ಮಾಡಿಸಿದ್ರೆ ಉಳಿಯುತ್ತಿದ್ರೇನೋ ಎಂದು ಶ್ರೀಗಳು ಪುನೀತ್ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೀಮ್ ನಲ್ಲಿ ವರ್ಕೌಟ್ ಮಾಡಿದ ನಟರ ಸಾವು ಹೇಗೆ..?