Select Your Language

Notifications

webdunia
webdunia
webdunia
webdunia

'ದೊಡ್ಡವರನ್ನು ಬಂಧಿಸಬೇಕು'

'ದೊಡ್ಡವರನ್ನು ಬಂಧಿಸಬೇಕು'
bangalore , ಶನಿವಾರ, 23 ಏಪ್ರಿಲ್ 2022 (18:39 IST)
ಕಲಬುರಗಿ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್‌ ಖರ್ಗೆ, ಪಿಎಸ್‌ಐ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು 13 ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಇವುಗಳು ಸಣ್ಣ ಮೀನುಗಳು. ಆದರೆ ತಿಮಿಂಗಿಲಗಳು ಓಡಾಡುತ್ತಿವೆ ಎಂದಿದ್ದಾರೆ. ಅಕ್ರಮದ ಹಣ ಮೇಲಿನವರಿಗೆ ಹೋಗುತ್ತಿದೆ ಎಂಬ ಮಾಹಿತಿ ಇದ್ದು, ಹಗರಣದಲ್ಲಿ ಶಾಮೀಲಾಗಿರುವ ದೊಡ್ಡವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಆಡಿಯೋದಲ್ಲಿ ಇರುವ ವ್ಯಕ್ತಿ ಈಗಾಗಲೇ ಪಿಎಸ್‌ಐ ಸಮವಸ್ತ್ರ ಧರಿಸಿದ್ದಾನೆ ಎಂದು ಆರೋಪಿಸಿದ ಅವರು, 545 ಹುದ್ದೆಗಳ ನೇಮಕಾತಿ ಅಕ್ರಮ ಅಲ್ಲದೆ 402 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅದಕ್ಕೂ ಫಿಕ್ಸ್ ಆಗಿದೆ ಎಂದು ಆಡಿಯೋದಲ್ಲಿ ಹೇಳಿಕೊಂಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮ್ಯಾನ್​​ಹೋಲ್​​ಗೆ ಬಿದ್ದ ಮಹಿಳೆ