Webdunia - Bharat's app for daily news and videos

Install App

ಬಿಬಿಸಿ ವಿರುದ್ದ ಕೇಂದ್ರ ಸರ್ಕಾರದ ನಿಲುವನ್ನ ಖಂಡಿಸಿ ಧರಣಿ ಮಾಡಲು ನಿರ್ಧಾರ- ವಾಟಾಳ್ ನಾಗರಾಜ್

Webdunia
ಗುರುವಾರ, 16 ಫೆಬ್ರವರಿ 2023 (17:46 IST)
ಬಹಳ ಗಂಭೀರಾವಾದಂತಹ ವಿಚಾರದ ಬಗ್ಗೆ ಇಡೀ ರಾಜ್ಯದ ಜನ‌ಚಿಂತನೆ ಮಾಡಬೇಕಿದೆ.ಚಿಂತಕರರು ಪ್ರಜಾಪ್ರಭುತ್ವ ವಾದಿಗಳು ಚಿಂತನೆ ಮಾಡಬೇಕು.ಮೊದಲು ನಮ್ಮ ಶಾಸನ ಸಭೆಯಲ್ಲಿ ಕೋಳಿವಾಡ ಇದ್ದಾಗ ಗಲಾಟೆಯಾಯ್ತು.ಮಾದ್ಯಮದವರನ್ನ ಸದನದಲ್ಲಿ ಬಿಡ ಬೇಕು ಅಂತಾ ಸದನದ ಕಲಾಪವನ್ನ ಜನರಿಗೆ ತೋರಿಸೋದ್ರಿಂದ ನಮ್ಮ ಪ್ರತಿನಿಧಿಗಳು  ಯಾವ ರೀತಿ ಇದ್ದಾರೆ ಅನ್ನೋದು ಗೊತ್ತಾಗುತ್ತೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
 
ಶಾಸನಸಭೆಯಲ್ಲಿ ಸದನ ನಡೆಸೋದು ತುರ್ತು ಪರಿಸ್ಥಿತಿ ,ಸರ್ವಾಧಿಕಾರಕ್ಕೆ ದಾರಿ ಮಾಡಿ ಕೊಡುತ್ತೆ.ಸ್ಪೀಕರ್ ಸದನದ ಯಜಮಾನರು,ಮಾಧ್ಯಮದವರು ಸದನವನ್ನ ಅವಲೋಕಿಸುವವುದಕ್ಕೆ ಅವಕಾಶ ಕೊಡಬೇಕಿತ್ತು.ಸ್ಪೀಕರ್ ಕೂಡ ಗಮನ ಹರಿಸಿಲ್ಲಾ.ಪಿ ಲಂಕೇಶ್ ವಿರುದ್ದ ಹಕ್ಕುಚ್ಯುತಿ ತಂದು ಜೈಲಿಗೆ ಹಾಕಬೇಕೆಂದು ತೀರ್ಮಾನ ಮಾಡಲಾಗಿತ್ತು.ಇದು ಹಕ್ಕುಚ್ಯುತಿ ಆಗೊಲ್ಲಾ ಅಂತಾ ನಾನು ಲಂಕೇಶ್ ಪರ ನಿಂತೆ.ಸದನದಲ್ಲಿ ಅವರ ಪರವಾಗಿ ನಾನು ಮಾತನಾಡಿದ್ದೆ.ಬಿಬಿಸಿ ಡಾಕ್ಯುಮೆಂಟರಿ ಎಲ್ಲಾ ಕಡೆ ಸದ್ದು ಮಾಡ್ತಿದೆ.ಸುಪ್ರಿಂಕೋರ್ಟ್ ಗೆ ಇದರ ಬಗ್ಗೆ ಕೇಂದ್ರ ಸರ್ಕಾರ ಸರಿಯಾಗಿ ಉತ್ತರ ನೀಡಿಲ್ಲ.ಕಚೇರಿಗಳಿಗೆ ಅಧಿಕಾರಿಗಳನ್ನ ನುಗ್ಗಿಸಿ ಭಯಬೀಳುಸ್ತಿದ್ದಾರೆ.ಮುಂದಿನ‌ ಬಾನುವಾರ ವಾಟಾಳ್ ಪಕ್ಷ ಕೇಂದ್ರದ ನೀತಿಯನ್ನ ವಿರೋಧಿಸಿ ಬಿಬಿಸಿ ವಿರುದ್ದ ಕೇಂದ್ರ ಸರ್ಕಾರದ ನಿಲುವನ್ನ ಖಂಡಿಸ್ತಿವಿ ಧರಣಿ ಮಾಡುವುದಾಗಿ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments