Publish Date: Mon, 01 Oct 2018 (18:49 IST)
Updated Date: Mon, 01 Oct 2018 (18:51 IST)
ಬೌದ್ಧ ಧರ್ಮಗುರು ದಲೈಲಾಮ ಕೊಲೆಗೆ ಸಂಚು ರೂಪಿಸಿರುವ ವಿಷಯ ಬೆಳಕಿಗೆ ಬಂದಿದೆ.
ರಾಷ್ಟ್ರೀಯ ತನಿಖಾ ತಂಡವು ಮಹತ್ವದ ಹತ್ಯೆ ಸಂಚನ್ನು ಬಯಲಿಗೆ ಎಳೆದಿದೆ. ಬೌದ್ಧ ಧರ್ಮಗುರು ದಲೈಲಾಮ ಅವರ ಹತ್ಯೆಗೆ ರೂಪಿಸಿದ್ದ ಸಂಚನ್ನು ಬಯಲಿಗೆ ಎಳೆದಿದ್ದಾರೆ.
ಈ ವರುಷದ ಜನೇವರಿ 18ರಂದು ಬಿಹಾರದ ಗಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಹಾರದ ರಾಜ್ಯಪಾಲ ಲಾಲ್ ಜೀ ಟಂಡನ್ ಅವರೊಂದಿಗೆ ದಲೈಲಾಮ ಅವರನ್ನು ಹತ್ಯೆ ಮಾಡಲು ಉಗ್ರರು ರೂಪಿಸಿದ್ದ ಸಂಚನ್ನು ಎನ್.ಐ.ಎ ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದೆ.
ಈಚೆಗೆ ಬಂಧಿಸಲ್ಪಟ್ಟ ಉಗ್ರ ಪೈಗಂಬರ್ ಶೇಖ್, ಅಹ್ಮದ್ ಅಲಿ, ಮುನೀರ್, ನೂರ್ ಅಸ್ಲಾಂ ಮೋಹಿನ್ ಮೊದಲಾದವರು ವಿಚಾರಣೆ ವೇಳೆ ಈ ಸ್ಪೋಟಕ ಮಾಹಿತಿ ಬಾಯಿ ಬಿಟ್ಟಿದ್ದಾರೆ.