Publish Date: Tue, 14 May 2019 (16:48 IST)
Updated Date: Tue, 14 May 2019 (16:49 IST)
ಲಾರಿ ತಡೆದದ್ದಕ್ಕೆ ಕೌನ್ಸಿಲರ್ ನ ತಮ್ಮನೊಬ್ಬ ದರ್ಪ ಮೆರೆದಿದ್ದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಹೋಮ್ ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಅನೀಲ್ ಹಲ್ಲೆಗೊಳಗಾದ ಹೋಂ ಗಾರ್ಡ್ ಆಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಕಣಿವೆ ನಾರಾಯಣಪುರ ಚೆಕ್ ಪೋಸ್ಟ್ ನಲ್ಲಿ ಹಲ್ಲೆಯಾಗಿದೆ.
ಅನೀಲ್ ಗೌರಿಬಿದನೂರು ತಾಲ್ಲೂಕಿನ ಹನುಮಂತಪುರ ಗ್ರಾಮದವರು. ಹಲ್ಲೆ ಮಾಡಿರುವ ರವಿ ಚಿಕ್ಕಬಳ್ಳಾಪುರ ವಾರ್ಡ್ ನಂ. 4 ಕೌನ್ಸಿಲರ್ ಗಜೇಂದ್ರರ ತಮ್ಮ.
ಮರಳು ತುಂಬಿದ್ದ ಲಾರಿ ತಡೆದದ್ದಕ್ಕೆ ಕೌನ್ಸಿಲರ್ ತಮ್ಮ ಅಟ್ಟಹಾಸ ಮೆರೆದಿದ್ದಾನೆ. ರವಿ ಹಲ್ಲೆ ನಡೆಸಿರುವ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ.
ಕೌನ್ಸಿಲರ್ ತಮ್ಮ ರವಿ ಇಂದ ಅವಾಚ್ಯ ಶಬ್ದಗಳಿಂದ ನಿಂದನೆ ನಡೆದಿದೆ. ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ರವಿಯಿಂದ ದರ್ಪ ತೋರಲಾಗಿದೆ. ನಾನು ಯಾರು ಗೊತ್ತ? ನನ್ನ ಲಾರಿ ತಡೆಯೋಕೆ ನೀನು ಯಾರು ಎಂದು ಹಲ್ಲೆ ನಡೆಸಿದ್ದಾನೆ.
Jagadeesh
Publish Date: Tue, 14 May 2019 (16:48 IST)
Updated Date: Tue, 14 May 2019 (16:49 IST)