Select Your Language

Notifications

webdunia
webdunia
webdunia
webdunia

ಜೆಡಿಎಸ್ ಜೊತೆಗಿನ ಮೈತ್ರಿಗೆ ಅಂತ್ಯ ಹಾಡಿದ ಕಾಂಗ್ರೆಸ್

ಜೆಡಿಎಸ್ ಜೊತೆಗಿನ ಮೈತ್ರಿಗೆ ಅಂತ್ಯ ಹಾಡಿದ ಕಾಂಗ್ರೆಸ್
ಬೆಂಗಳೂರು , ಶುಕ್ರವಾರ, 23 ಆಗಸ್ಟ್ 2019 (13:34 IST)
ಬೆಂಗಳೂರು : ಒಂದು ವರ್ಷದ  ಕಾಂಗ್ರೆಸ್- ಜೆಡಿಎಸ್ ಮೈತ್ರಿಗೆ ಇಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಎಳ್ಳು ನೀರು ಬಿಟ್ಟಿದ್ದಾರೆ.



ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣವೆಂದು ದೇವೇಗೌಡರು ಹೇಳಿರುವುದಕ್ಕೆ ಕೋಪಗೊಂಡ ಸಿದ್ದರಾಮಯ್ಯ ಸುದ್ದಿಗೋಷ್ಟಿ ನಡೆಸಿ ಮೈತ್ರಿ ಸರ್ಕಾರ ಬೀಳಲು ದೇವೇಗೌಡರ ಕುಟುಂಬವೇ ಕಾರಣ ಎಂದು ಪ್ರತ್ಯಾರೋಪ ಮಾಡಿದರು.  ಈ ಮೂಲಕ ಅವರು ಇಂದೇ  ಕೈ ಪಾಳಯದಲ್ಲಿ ಮೂಡಿರೋ ಅಭಿಪ್ರಾಯದಂತೆ ದೋಸ್ತಿ ಅಂತ್ಯಕ್ಕೆ ಒಂದು ಕೊನೆ ಮೊಳೆ ಹೊಡೆದಿದ್ದಾರೆ.

 

ಅಲ್ಲದೇ ಮೈತ್ರಿ ಮುರಿದುಕೊಂಡರೆ ಕಾಂಗ್ರೆಸ್ ಗೆ ಲಾಭವಾಗುವ ಲೆಕ್ಕಚಾರ ಹಾಕಿದ ಸಿದ್ದರಾಮಯ್ಯ ಪಕ್ಷಕ್ಕೆ ಈಗ ಆಗಿರೋ ಡ್ಯಾಮೇಜ್ ಕಂಟ್ರೋಲ್ ಆಗಬಹುದು. ಉಪಚುನಾವಣೆಯಲ್ಲಿ ಪಕ್ಷಕ್ಕೆ ನಷ್ಟಕ್ಕಿಂತ ಲಾಭವೇ ಹೆಚ್ಚಾಗಲಿದೆ ಎಂಬ ಕಾರಣಕ್ಕೆ ಜೆಡಿಎಸ್ ಜೊತೆಗಿನ ಮೈತ್ರಿಗೆ ಅಂತ್ಯ ಹಾಡಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರ ವಿರುದ್ಧ ದೂರು ದಾಖಲು. ಕಾರಣವೇನು ಗೊತ್ತಾ?