Select Your Language

Notifications

webdunia
webdunia
webdunia
webdunia

ಮೈತ್ರಿ ಸರ್ಕಾರ ಬೀಳಲು ದೇವೇಗೌಡ ಹಾಗೂ ಅವರ ಮಕ್ಕಳೇ ಕಾರಣ-ಸಿದ್ದರಾಮಯ್ಯ ಆರೋಪ

ಮೈತ್ರಿ ಸರ್ಕಾರ ಬೀಳಲು ದೇವೇಗೌಡ ಹಾಗೂ ಅವರ ಮಕ್ಕಳೇ ಕಾರಣ-ಸಿದ್ದರಾಮಯ್ಯ ಆರೋಪ
ಬೆಂಗಳೂರು , ಶುಕ್ರವಾರ, 23 ಆಗಸ್ಟ್ 2019 (11:53 IST)
ಬೆಂಗಳೂರು : ನಾನು, ನನ್ನ ಮೊಮ್ಮಗನ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ದೇವೇಗೌಡ ಹೇಳಿಕೆ ವಿಚಾರಕ್ಕೆ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.




ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಪತನಕ್ಕೆ ಹೆಚ್.ಡಿ. ಕುಮಾರಸ್ವಾಮಿ ರೇವಣ್ಣ, ದೇವೇಗೌಡರೇ ಕಾರಣ , ಎಲ್ಲಾ ಶಾಸಕರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಿದ್ದರೆ, ಮೈತ್ರಿ ಸರ್ಕಾರ ಪತನವಾಗುತ್ತಿರಲಿಲ್ಲ. ಏಕಪಕ್ಷೀಯ ನಿರ್ಧಾರ, ಶಾಸಕರು, ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಮೈತ್ರಿ ಸರ್ಕಾರದ ಪತನಕ್ಕೆ ಕಾರಣ ಎಂದು ಹೇಳಿದ್ದಾರೆ.


ಅಲ್ಲದೇ ಸರ್ಕಾರ ಬೀಳಿಸುವಂತಹ ನೀಚ ರಾಜಕಾರಣ ನಾನು ಮಾಡಲ್ಲ. ಅದೇನಿದ್ದರೂ ದೇವೇಗೌಡ, ಅವರ ಮಕ್ಕಳ ಹುಟ್ಟುಗುಣ. ಧರಂಸಿಗ್ ಸರ್ಕಾರವನ್ನು ಬೀಳಿಸಿದವರು ಯಾರು? ಬೊಮ್ಮಾಯಿ ಸರ್ಕಾರವನ್ನು ಬೀಲಿಸಿದವರು ಯಾರು? ರಾತ್ರೋರಾತ್ರಿ ಅವರ ಕ್ಯಾಂಪ್ ಗೆ ಹೋಗಿ ಸೇರಿಕೊಂಡವರ್ಯಾರು? ನಾನು ಯಾವತ್ತು ಅಧಿಕಾರದ ಹಿಂದೆ ಬಿದ್ದವನಲ್ಲ.  ಬಿಜೆಪಿ ಜತೆ ಸರ್ಕಾರ ರಚಿಸಿದ್ರೆ ನನ್ನಹೆಣದ ಮೇಲೆ ರಚಿಸಲಿ ಎಂದು ದೇವೇಗೌಡರು ಹೇಳಿದ್ದರು. ಆದ್ರೆ ಹೆಚ್ ಡಿಡಿ ಸಹಕಾರವಿಲ್ಲದೆ ಬಿಜೆಪಿ ಜತೆ ಸರ್ಕಾರ ಸಾಧ್ಯವಿಲ್ಲ. ಹಾಗಾಗಿ ನಿಜವಾದ ವಚನ ಭ್ರಷ್ಟರು ಯಾರು? ಎದು ಅವರು ಪ್ರಶ್ನಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಿದಂಬರಂ ಬಂಧನ ವಿಚಾರದಲ್ಲಿ ಪ್ರಧಾನಿ ಮೋದಿ ಸಮರ್ಥಿಸಿಕೊಂಡ ಮತ್ತೊಬ್ಬ ಕಾಂಗ್ರೆಸ್ ನಾಯಕ