Select Your Language

Notifications

webdunia
webdunia
webdunia
webdunia

ದೇಶಕ್ಕೆ ನೆಹರೂ ಮನೆತನ ಶಾಪವಾಯ್ತು ಎಂದ ಬಿಜೆಪಿ ಶಾಸಕ

ದೇಶಕ್ಕೆ ನೆಹರೂ ಮನೆತನ ಶಾಪವಾಯ್ತು ಎಂದ ಬಿಜೆಪಿ ಶಾಸಕ
ಬೀದರ್ , ಶುಕ್ರವಾರ, 10 ಆಗಸ್ಟ್ 2018 (12:42 IST)
ಕಾಂಗ್ರೆಸ್, ಆಡಳಿತ ಹಾಗೂ ನೆಹರೂ ಮನೆತನದ ಆಡಳಿತ ಈ ದೇಶಕ್ಕೆ ವರವಾಗಿಲ್ಲ ಶಾಪವಾಯ್ತು. ಹೀಗಂತ ಬಿಜೆಪಿ ಹಿರಿಯ ಶಾಸಕ ಆರೋಪಿಸಿದ್ದಾರೆ.

ಬಿಜೆಪಿ ಹಿರಿಯ ನಾಯಕ ಮತ್ತು ಶಾಸಕ ಗೋವಿಂದ ಕಾರಜೋಳ ಅವರು ಕೈ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.  56 ವರ್ಷ ಕಾಂಗ್ರೆಸ್ ನವರು ಭ್ರಷ್ಠಾಚಾರದಲ್ಲಿ ಮುಳಗಿ ಈಡೀ ದೇಶದ ಸಂಪತ್ತನ್ನು ಲೂಟಿ ಮಾಡಿರುವಂತವರು. ಬ್ರೀಟಿಷರಿಗಿಂತ ಹೆಚ್ಚು ಸಂಪತ್ತು ಲೂಟಿ ಮಾಡಿದವರು ಕಾಂಗ್ರೆಸ್ ನವರು ಎಂದು ದೂರಿದ್ದಾರೆ.  

ಈ ದೇಶದ ಆದಾಯವನ್ನ ಈ ದೇಶದ‌ ಖಜಾನೆಯನ್ನ ಲೂಟಿ ಮಾಡಿವರು ಕಾಂಗ್ರೆಸ್ ನವರು ಎಂದು ಬೀದರ್ ನಲ್ಲಿ ಶಾಸಕ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ. ಬಿಜೆಪಿಯ ಪದಾಧಿಕಾರಿಗಳ ಸಭೆಯಲ್ಲಿ ನೆಹರೂ ಮನೆತನ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.






Share this Story:

Follow Webdunia kannada

ಮುಂದಿನ ಸುದ್ದಿ

ಜೈಲ್ ಭರೋ ನಡೆಸಿದ ನೌಕರರು…