Select Your Language

Notifications

webdunia
webdunia
webdunia
webdunia

ಕೆಲವನ್ನು ಸೋಲ್ತೀವಿ, ಕೆಲವು ಬಾರಿ ಗೆಲ್ತೀವಿ, ಅದರಲ್ಲೇನಿದೆ? ಸೋನಿಯಾ ಗಾಂಧಿ ಪ್ರಶ್ನೆ

ಕೆಲವನ್ನು ಸೋಲ್ತೀವಿ, ಕೆಲವು ಬಾರಿ ಗೆಲ್ತೀವಿ, ಅದರಲ್ಲೇನಿದೆ? ಸೋನಿಯಾ ಗಾಂಧಿ ಪ್ರಶ್ನೆ
ನವದೆಹಲಿ , ಶುಕ್ರವಾರ, 10 ಆಗಸ್ಟ್ 2018 (09:19 IST)
ನವದೆಹಲಿ: ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಸೋತ ಬಳಿಕ ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

ಕೆಲವೊಂದನ್ನು ನಾವು ಸೋಲ್ತೀವಿ, ಕೆಲವೊಂದನ್ನು ಗೆಲ್ತೀವಿ. ಅದರಲ್ಲೇನಿದೆ?’ ಎಂದು ಸೋನಿಯಾ ಪತ್ರಕರ್ತರು ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆ ಸೋತ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ರಾಜ್ಯಸಭೆ ಉಪಸಭಾಪತಿಯಾಗಿ ಎನ್ ಡಿಎ ಅಭ್ಯರ್ಥಿ ಹರಿವಂಶ್ ಗೆಲುವಿನ ಬಳಿಕ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ನಿಂದ ಕರ್ನಾಟಕ ಮೂಲದ ಬಿಕೆ ಹರಿಪ್ರಸಾದ್ ನಾಮ ಪತ್ರ ಸಲ್ಲಿಸಿದ್ದರು. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಎಎಪಿ, ವೈಎಸ್ ಆರ್ ಕಾಂಗ್ರೆಸ್ ಬೆಂಬಲ ಸಿಕ್ಕಿರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಕೋಳಿ ಎಸೆದು ಹರಕೆ ತೀರಿಸಿದ ಭಕ್ತರು