ವ್ಯವಸ್ಥಿತವಾಗಿ ನೆಟ್ವರ್ಕ್ ಮಾಡಿಕೊಂಡು ಮೊಬೈಲ್ ಎಗರಿಸುತ್ತಿದ್ದ ಅಸಾಮಿಗಳು

Webdunia
ಶನಿವಾರ, 14 ಜನವರಿ 2023 (19:25 IST)
ದಿನಪತ್ರಿಕೆ ಗಳು ಕೈಯಲ್ಲಿ ಹಿಡಿದು ರಷ್ ಆಗಿರೋ ಬಸ್ ಗಳನ್ನ ಹತ್ತುತ್ತಿದ್ದ ಆರೋಪಿಗಳು. ಇದೇ ನ್ಯೂ ಸ್ ಪೇಪರ್ಗಳನ್ನ ಅಡ್ಡಹಿಡಿದು ಬಸ್ ನಲ್ಲಿದ್ದ ಪ್ಯಾಸೆಂಜರ್ ಗಳ ಜೇಬಿನಲ್ಲಿದ್ದ ಮೊಬೈಲ್‌ಗಳನ್ನ ಕ್ಷಣಾರ್ಧದಲ್ಲಿ ಎಗರಿಸಿ ತಮ್ಮ ಕೈಚಳ ತೋರಿಸುತ್ತಿದ್ದ ಖತರ್ನಾಕ್‌ ಅಸಾಮಿಗಳನ್ನ ಪೊಲೀಸರು ಸಿನಿಮಾಯ ಸ್ಟೈಲ್‌ನಲ್ಲಿ ಅರೆಸ್ಟ್ ಮಾಡಿದ್ದಾರೆ. ತನಿಖೆಯಲ್ಲಿ ಇವರ ಮತ್ತೊಂದು ಕರಾಳ ಮುಖ ಬಯಲಾಗಿದೆ.
ಸಿಲಿಕಾನ್ ಸಿಟಿ‌ ಜನರ ಸಂಪರ್ಕ ಜೀವನಾಡಿ  ಬಿಎಂಟಿಸಿ ಬಸ್ ಅಂದ್ರೆ ತಪ್ಪಗಲಾರದು. ಸದಾ ಜನರಿಂದ ರಷ್ ಆಗಿರೋ ಬಸ್ ಗಳನ್ನ ಟಾರ್ಗೆಟ್ ಮಾಡಿ ಬರೋ ಈ ಕತರ್ನಾಕ್ ಅಸಾಮಿಗಳಾದ ಜಾಫರ್ ಸಿದ್ದೀಕ್, ಸೈಯಾದ್ ಅಖಿಲ್, ಜತೆಯಲ್ಲಿ ಬಂದಿರುವ ಸಹಚರರನ್ನ ಬಳಸಿಕೊಂಡು ಮೊಬೈಲ್‌ಗಳನ್ನ ಎಗರಿಸಿ ತಮ್ಮ ಕೆಲಸ ಆಗುತ್ತಿದ್ದಂತೆ ಮಾಲನ್ನ ಆಟೋದಲ್ಲಿ ಬರುತ್ತಿದ್ದ ಮತ್ತೊಂದು ಟೀಂ‌ಗೆ ಪಾಸ್ ಮಾಡುತ್ತಿದ್ದರು.ಹೀಗೆ  ಕದ್ದ ಮಾಲ್‌ ಗಳನ್ನ ಜೆಜೆ ನಗರ, ಗೋರಿಪಾಳ್ಯ ಭಾಗದಲ್ಲಿ ರುವ ಆರೋಪಿಗಳ ಕೈಗೆ ಮಾರಾಟ ಮಾಡಲು ಕೊಡುತ್ತಿದ್ದರು.
ಕದ್ದ ಮೊಬೈಲ್‌ಗಳ ತಮ್ಮ ಕೈ ಸೇರುತ್ತಿದ್ದಂತೆ ಅದರ ಐಎಂಇಐ ನಂಬರ್ ಗಳನ್ನ‌ ಚೇಂಜ್  ಮಾಡಿ ವಿದೇಶಗಳಿಗೆ ರವಾನಿಸುವ ಪ್ಲಾನ್ ಮಾಡಿಕೊಂಡಿದ್ರಂತೆ.ಇಂತಹ ಐನಾತಿ‌ ಕಳ್ಳರ ಜಾಲವನ್ನು ಸುದ್ದುಗುಂಟೆಪಾಳ್ಯ ಪೊಲೀಸರು ಸಕ್ಸಸ್ ಫುಲ್ ಆಗಿ ಅರೆಸ್ಟ್ ಮಾಡಿದ್ದಾರೆ. ಇದು ಕೇವಲ ಮೊಬೈಲ್‌ ಕಳ್ಳರಷ್ಟೆ ಎಂದು ಸುಮ್ಮನಾಗದೇ ಪಕ್ಕ ಪ್ಲಾನ್ ಮಾಡಿ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಗ್ರಹಾರದಲ್ಲಿ ಅಕ್ರಮ ಹೆಚ್ಚು ಬೆನ್ನಲ್ಲೇ, ಖಡಕ್ ಪೊಲೀಸ್ ಅಧಿಕಾರಿ ಎಂಟ್ರಿ, ಕೈದಿಗಳಿಗೆ ನಡುಕ

ಷಡ್ಯಂತ್ರ ಬಯಲು ಬೆನ್ನಲ್ಲೇ ಮಹತ್ವದ ಪ್ರಕಟಣೆ ಹೊರಡಿಸಿದ ಧರ್ಮಸ್ಥಳ

ರೇಷ್ಮೆ ಬದಲು ಪಾಲಿಸ್ಟರ್ ಶಾಲು ತಿರುಪತಿ ದೇವಸ್ಥಾನದಲ್ಲಿ ಏನಿದು ಹಗರಣ

ಐಪಿಎಲ್ ಪಂದ್ಯವನ್ನು ಬೆಂಗಳೂರಿನಿಂದ ಹೊರಗೆ ಹೋಗಲು ಬಿಡುವುದಿಲ್ಲ: ಶಿವಕುಮಾರ್‌

ದ್ವೇಷ ಭಾಷಣ ಕಾರುವವರಿಗೆ ಮುಂದೈತೆ ಮಾರಿಹಬ್ಬ: ವಿಧಾನಸಭೆಯಲ್ಲಿ ಮಂಡನೆಯಾಯ್ತು ಪ್ರತಿಬಂಧಕ ಮಸೂದೆ

ಮುಂದಿನ ಸುದ್ದಿ
Show comments