Select Your Language

Notifications

webdunia
webdunia
webdunia
webdunia

ಕೇಂದ್ರ ಅಧ್ಯಯನ ತಂಡದ ಬೆವರಿಳಿಸಿದ ಯೋಧ

ಕೇಂದ್ರ ಅಧ್ಯಯನ ತಂಡದ ಬೆವರಿಳಿಸಿದ ಯೋಧ
ಚಿಕ್ಕೋಡಿ , ಭಾನುವಾರ, 25 ಆಗಸ್ಟ್ 2019 (17:53 IST)
ಕೇಂದ್ರ ಪ್ರವಾಹ ಅಧ್ಯಯನ ತಂಡದ ಬೆವರನ್ನು ಬಿ ಎಸ್ ಎಫ್  ಯೋಧರೊಬ್ಬರು ಇಳಿಸಿರೋ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ, ಕಲ್ಲೋಳ, ಮಾಂಜರಿ ಸೇರಿದಂತೆ ಹಲವೆಡೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿತ್ತು.

ಈ ವೇಳೆ ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಳ್ಳಿ ಪೊಲೀಸರನ್ನು ಒಂದು ಕಡೆ ತರಾಟೆಗೆ ತೆಗೆದುಕೊಳ್ತಾರೆ. ಏನು ದನಾ ಕಾಯ್ತೀರಾ ಜನರನ್ನು ಸರೀಸೋಕೆ ಬರಲ್ವಾ ಅಂದ ಕೆಲ ಹೊತ್ತಿನಲ್ಲೆ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಯೋಧ ಕುಂಬಾರ ಎನ್ನುವವರು ದಿಢೀರ್ ರಸ್ತೆ ತಡೆ ಮಾಡಿ ಕೇಂದ್ರ ತಂಡದವರು ಸರಿಯಾಗಿ ಪರಿಶೀಲನೆ ಮಾಡದೇ ಅನ್ಯಾಯ ಮಾಡ್ತಾ ಇದ್ದಾರೆ.

ಇಲ್ಲಿನ ಶಾಸಕರು ರಾಜೀನಾಮೆ ಕೊಟ್ಟ ಕಾರಣಕ್ಕೆ ನಮ್ಮ ಗೊಳು ಕೇಳುವವರಿಲ್ಲ ಅನ್ನುವ ಮೂಲಕ ರಸ್ತೆ ತಡೆ ನಡೆಸಿದರು. ಈ ವೇಳೆ ಪೊಲೀಸ್ ಸಿಬ್ಬಂದಿ ಮತ್ತು ಯೋಧನ ನಡುವೆ ತಳ್ಳಾಟ, ಎಳೆದಾಟ ನಡೆಯಿತು.



Share this Story:

Follow Webdunia kannada

ಮುಂದಿನ ಸುದ್ದಿ

‘ಸಿದ್ದರಾಮಯ್ಯನವರೇ ನನ್ನ ಮೊದಲ ಶತ್ರು ಎಂದ ಕುಮಾರಸ್ವಾಮಿ'