Select Your Language

Notifications

webdunia
webdunia
webdunia
webdunia

‘ಸಿದ್ದರಾಮಯ್ಯನವರೇ ನನ್ನ ಮೊದಲ ಶತ್ರು ಎಂದ ಕುಮಾರಸ್ವಾಮಿ'

‘ಸಿದ್ದರಾಮಯ್ಯನವರೇ ನನ್ನ ಮೊದಲ ಶತ್ರು ಎಂದ ಕುಮಾರಸ್ವಾಮಿ'
ಬೆಂಗಳೂರು , ಭಾನುವಾರ, 25 ಆಗಸ್ಟ್ 2019 (17:39 IST)
ಕಾಂಗ್ರೆಸ್ ಪಕ್ಷದ ಶಾಸಕರನ್ನು ನನ್ನ ವಿರುದ್ಧ ಎತ್ತಿಕಟ್ಟುವ ಮೂಲಕ ಮೈತ್ರಿ ಸರಕಾರ ಕೆಡವಿದ ಸಿದ್ದರಾಮಯ್ಯನವರೇ ನನ್ನ ಮೊದಲ ಶತ್ರು.

ಹೀಗಂತ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ. ಮೈತ್ರಿ ಸರಕಾರ ಬೀಳಲು ಸಿದ್ದರಾಮಯ್ಯ ಕಾರಣರಾಗಿದ್ದಾರೆ. ನಾನು ಸಿಎಂ ಸ್ಥಾನದಲ್ಲಿ ಕುಳಿತು ಆಡಳಿತ ನಡೆಸೋದು ಸಿದ್ದರಾಮಯ್ಯಗೆ ಬೇಕಿರಲಿಲ್ಲ.

ಹೀಗಾಗಿ ತಮ್ಮ ಆಪ್ತ ಶಾಸಕರನ್ನು ನನ್ನ ವಿರುದ್ಧ ಎತ್ತಿಕಟ್ಟಿ ಅನರ್ಹಗೊಳಿಸಿದ್ರು. ಅವರು ಸರಕಾರಕ್ಕೆ ಬೆಂಬಲ ಕೊಡೋಕೆ ಮುಂದಾದ್ರೂ ಅದನ್ನು ಸಿದ್ದರಾಮಯ್ಯ ತಡೆದ್ರು ಎಂದು ದೂರಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಆದೇಶಗಳನ್ನು ಪಾಲಿಸದ ಸಿದ್ದರಾಮಯ್ಯ ದೋಸ್ತಿ ಸರಕಾರ ಪತನಗೊಳಿಸಿದ್ರು. ಇನ್ನು ಮೈತ್ರಿ ಸರಕಾರದ ಅವಧಿಯಲ್ಲಿ ನಡೆದಿದೆ ಎಂದು ಆರೋಪಿಸಲಾಗುತ್ತಿರುವ ಫೋನ್ ಟ್ಯಾಪಿಂಗ್ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಸಿದ್ದರಾಮಯ್ಯ ಒತ್ತಡ ಹಾಕಿದ್ದಾರೆ ಎಂದು ದೂರಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಪುಟ್ಟ ಮಗನ ಎದುರಲ್ಲೇ ನಡೆಯಿತು ಆ ಕೆಟ್ಟ ಕೆಲಸ