Select Your Language

Notifications

webdunia
webdunia
webdunia
webdunia

ಹೇಮಾವತಿ ನೀರು ಹರಿಸುವ ವಿಚಾರದಲ್ಲಿ ಗೂಂಡಾಗಿರಿ ಮಾಡಿದ ಜೆಡಿಎಸ್‍ ನ ಮಾಜಿ ಶಾಸಕ

ಹೇಮಾವತಿ ನೀರು ಹರಿಸುವ ವಿಚಾರದಲ್ಲಿ ಗೂಂಡಾಗಿರಿ ಮಾಡಿದ ಜೆಡಿಎಸ್‍ ನ ಮಾಜಿ ಶಾಸಕ
ತುಮಕೂರು , ಭಾನುವಾರ, 25 ಆಗಸ್ಟ್ 2019 (13:37 IST)
ತುಮಕೂರು : ಹೇಮಾವತಿ ನೀರು ಹರಿಸುವ ವಿಚಾರದಲ್ಲಿ ತುರುವೇಕೆರೆ ಜೆಡಿಎಸ್‍ ನ ಮಾಜಿ ಶಾಸಕ ಎಮ್.ಟಿ ಕೃಷ್ಣಪ್ಪ ನಿಯಮ ಉಲ್ಲಂಘನೆ ಮಾಡಿ ದರ್ಪ ತೋರಿದ್ದಾರೆ ಎಂಬುದಾಗಿ ತಿಳಿದುಬಂದಿದೆ.



ಹೇಮಾವತಿ ನೀರು ನಿರ್ವಹಣಾ ಸಭೆಯಲ್ಲಿ ವೇಳಾಪಟ್ಟಿ ಪ್ರಕಾರ ತಾಲೂಕುಗಳಿಗೆ ನೀರು ಬಿಡಲು ನಿರ್ಧಾರ ಮಾಡಲಾಗಿತ್ತು. ಆದರೆ ಮಾಜಿ ಶಾಸಕ ಎಮ್.ಟಿ ಕೃಷ್ಣಪ್ಪ ನಿಯಮ ಪಾಲಿಸದೆ ಹೇಮಾವತಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಪಡೆಯದೇ ನೀರನ್ನು ಹರಿಸಿದ್ದಾರೆ. ಈ ವೇಳೆ ಎಸ್ಕೇಪ್ ಗೇಟಿಗೆ ಹಾನಿ ಉಂಟಾಗಿದೆ.

 

ತುರುವೇಕೆರೆಯಲ್ಲಿ ಈಗ ಬಿಜೆಪಿ ಮಸಾಲ ಜಯರಾಮ್ ಶಾಸಕರಾಗಿದ್ದು, ಜೆಡಿಎಸ್‍ ನ  ಮಾಜಿ ಶಾಸಕ ಈ ರೀತಿ ದರ್ಪ ತೋರಿದಕ್ಕೆ   ಬಿಜೆಪಿಯವರು ಗರಂ ಆಗಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಟಿ.ಆರ್ ಸ್ವಾಮಿಗೆ ನೀಡಿದ್ದ ಹುದ್ದೆಯನ್ನು ಬಿಜೆಪಿ ಸರ್ಕಾರ ರದ್ದುಮಾಡಿದ್ದೇಕೆ?