Select Your Language

Notifications

webdunia
webdunia
webdunia
webdunia

ಡಿ.17 ರಂದು ಅತಿಥಿ ಉಪನ್ಯಾಸಕರಿಂದ ಸುವರ್ಣಸೌಧ ಮುತ್ತಿಗೆ!

ಡಿ.17 ರಂದು ಅತಿಥಿ ಉಪನ್ಯಾಸಕರಿಂದ ಸುವರ್ಣಸೌಧ ಮುತ್ತಿಗೆ!
ಹಾವೇರಿ , ಶನಿವಾರ, 15 ಡಿಸೆಂಬರ್ 2018 (17:48 IST)
ಸೇವಾ ಭದ್ರತೆ ಘೋಷಣೆಗೆ ಆಗ್ರಹಿಸಿ ರಾಜ್ಯ ಅತಿಥಿ ಉಪನ್ಯಾಸಕರಿಂದ ಡಿಸೆಂಬರ್ 17ರಂದು ಸುವರ್ಣಸೌಧ ಮುತ್ತಿಗೆ ನಡೆಯಲಿದೆ.

ಹಾವೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅತಿಥಿ ಉಪನ್ಯಾಸಕರು, ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 13500 ಕ್ಕೂ ಅಧಿಕ ಅತಿಥಿ ಉಪನ್ಯಾಸಕರಿಗೆ ಸರಿಯಾದ ಸೇವಾ ಭದ್ರತೆ ಇಲ್ಲದೇ ಇರುವುದರಿಂದ ಇದೇ ಡಿಸೆಂಬರ್ 17 ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ.

ಸರಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗದ ಕಾರಣ ಮುತ್ತಿಗೆ ಹಾಕುವ ಮೂಲಕ ಎಚ್ಚರಿಕೆ ನೀಡುತ್ತೇವೆ ಎಂದರು. ಇನ್ನೂ ನೆರೆಯ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂ ಗೊಳಿಸಲಾಗಿದ್ದು, ಸುಪ್ರೀಂ ಕೋರ್ಟ್ ಅನ್ವಯ 309 ಕಲಂ ಅಡಿಯಲ್ಲಿ ಸೇವಾ ಭದ್ರತೆ ನೀಡಬೇಕೆಂದು ಆಗ್ರಹಿಸಿದರು. ಅತಿಥಿ ಉಪನ್ಯಾಸಕರು ಕುಟುಂಬ ಸಮೇತ ಬೆಳಗಾವಿ ಸುವರ್ಣ ಸೌಧ ಚಲೋ ನಡೆಸಲಾಗುವುದು ಎಂದು ತಿಳಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಕೈಗಾ ಅಣು ವಿದ್ಯುತ್ ಯೋಜನೆಯ 5, 6 ನೇ ಘಟಕ ನಿರ್ಮಾಣಕ್ಕೆ ವಿರೋಧ